Select Your Language

Notifications

webdunia
webdunia
webdunia
webdunia

ಜಾಫರ್ ಷರೀಫ್‌ಗೆ ಕೈತಪ್ಪಿದ ಟಿಕೆಟ್: ನೊಂದ ಅಭಿಮಾನಿ ಆತ್ಮಹತ್ಯೆಗೆ ಯತ್ನ

ಜಾಫರ್ ಷರೀಫ್‌ಗೆ ಕೈತಪ್ಪಿದ ಟಿಕೆಟ್: ನೊಂದ ಅಭಿಮಾನಿ ಆತ್ಮಹತ್ಯೆಗೆ ಯತ್ನ
, ಗುರುವಾರ, 20 ಮಾರ್ಚ್ 2014 (11:41 IST)
PR
PR
ಬೆಂಗಳೂರು: ಜಾಫರ್ ಷರೀಫ್ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ತೀವ್ರ ನೊಂದಿದ್ದ ಅವಕ ಕಟ್ಟಾ ಅಭಿಮಾನಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಅವನ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 43 ವರ್ಷ ವಯಸ್ಸಿನ ಸಯ್ಯದ್ ಜಾವಿದ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಿನ್ನೆ ರಾತ್ರಿ ವಿಷ ಕುಡಿದ ಕೂಡಲೇ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಜಾಫರ್ ಷರೀಫ್ ಅವರು ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಕೆಟ್ ಬಯಸಿದ್ದರು. ಆದರೆ ಕಾಂಗ್ರೆಸ್ ಪಕ್ಷವು ಯುವಕರಿಗೆ ಟಿಕೆಟ್ ನೀಡುವ ದೃಷ್ಟಿಯಿಂದ ರಿಜ್ವಾನ್ ಅವರಿಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಟಿಕೆಟ್ ನೀಡಿತ್ತು.

ಇದರಿಂದ ಅಸಮಾಧಾನಗೊಂಡಿದ್ದ ಜಾಫರ್ ಷರೀಫ್ ಅವರಿಗೆ ದೇವೇಗೌಡರು ತಮ್ಮ ಪಕ್ಷಕ್ಕೆ ಸೇರಿದರೆ ಟಿಕೆಟ್ ನೀಡುವುದಾಗಿ ಆಮಿಷ ಒಡ್ಡಿದ್ದರು. ಮೈಸೂರು ಕ್ಷೇತ್ರದಿಂದ ಜಾಫರ್ ಷರೀಪ್ ಅವರನ್ನು ಕಣಕ್ಕಿಳಿಸುವುದಾಗಿಯೂ ದೇವೇಗೌಡರು ತಿಳಿಸಿದ್ದರು. ತಾವು ಮೆಕ್ಕಾ ಪ್ರಯಾಣಕ್ಕೆ ಹೋಗಿ ಬಂದ ನಂತರವೇ ಜೆಡಿಎಸ್‌ಗೆ ಸೇರುವ ಬಗ್ಗೆ ತೀರ್ಮಾನಿಸುವುದಾಗಿ ಷರೀಫ್ ಹೇಳಿದ್ದಾರೆ.

Share this Story:

Follow Webdunia kannada