Webdunia - Bharat's app for daily news and videos

Install App

ಜಯಲಲಿತಾ ಪ್ರಧಾನಿಯಾದರೆ ದೇಶಕ್ಕೆ ಅಮ್ಮ ಆಗುತ್ತಾರೆ: ದೇವೇಗೌಡ

Webdunia
ಸೋಮವಾರ, 10 ಫೆಬ್ರವರಿ 2014 (12:58 IST)
PR
ಜಯಲಲಿತಾ ಅವರನ್ನು ತಮಿಳುನಾಡಿನ ಜನ ಅಮ್ಮ ಎಂದು ಕರೆಯುತ್ತಿದ್ದಾರೆ. ಅವರು ಪ್ರಧಾನಿಯಾದರೆ ಇಡೀ ದೇಶಕ್ಕೆ ಅಮ್ಮ ಆಗುತ್ತಾರೆ. ಅವರ ಬಳಿ ನಮ್ಮ ಮಕ್ಕಳಿಗೆ (ಕರ್ನಾಟಕ) ನೀರು ಕೊಡಿ ಕೇಳಬಹುದು ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ಕೇಂದ್ರದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬಂದಲ್ಲಿ ಯಾರೂ ಬೇಕಾದರೂ ಪ್ರಧಾನಮಂತ್ರಿಯಾಗಬಹುದು ಎಂದು

ಜೆಡಿಎಸ್ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿದ ಅವರು, ತೃತೀಯ ರಂಗದ ಮುಲಾಯಂ ಸಿಂಗ್, ನಿತೀಶ್‌ಕುಮಾರ್, ಜಯಲಲಿತಾ ಹೀಗೆ ಯಾರು ಬೇಕಾದರೂ ಪ್ರಧಾನಿ ಆಗಬಹುದು ಎಂದರು.

ಒಟ್ಟಾರೆ ಅಮ್ಮನ ಸ್ಥಾನದಲ್ಲಿರುವ ಜಯಲಲಿತಾ ಅವರು ನೀರು ಕೊಟ್ಟೇ ಕೊಡುತ್ತಾರೆ. ಕಾವೇರಿ ಸಮಸ್ಯೆ ಪರಿಹರಿಸಬಹುದು. ಹೀಗಾಗಿ ಜಯಲಲಿತಾ ಅವರು ಪ್ರಧಾನಿಯಾದರೇ ನಮ್ಮದೇನು ಅಭ್ಯಂತರವಿಲ್ಲ ಎಂದರು.

ಜೆಡಿಎಸ್‌ಉಳಿಯಬೇಕು: ಜೆಡಿಎಸ್ ಪಕ್ಷ ಉಳಿಯಬೇಕು, ಇನ್ನಷ್ಟು ಬೆಳೆಯಬೇಕು. ನನಗೆ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಬೇಕೆಂಬ ಚಪಲ ಇಲ್ಲ. ಪುತ್ರ ವಾತ್ಯಲ್ಯವೂ ಇಲ್ಲ. ಜೆಡಿಎಸ್ ವಂಶಪಾರಂಪರ್ಯ ಪಕ್ಷವಲ್ಲ. ದೇಶದಲ್ಲಿ ಯಾವುದೇ ಪ್ರಾದೇಶಿಕ ಪಕ್ಷ ಮಾಡದಿರುವ ಕೆಲಸವನ್ನು ಜೆಡಿಎಸ್ ಮಾಡಿದೆ.

ಇದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮೆರೆಯುತ್ತಿರುವ ನಾಯಕರಿಗೆ ಗೊತ್ತಾಗಬೇಕು ಎಂದು ಅವರು ಹೇಳಿದರು. 50 ವರ್ಷಗಳ ರಾಜಕಾರಣದಲ್ಲಿ, ಜೀವನದಲ್ಲಿ ತುಂಬಾ ನೊಂದಿದ್ದೇನೆ, ಎಂದೂ ಸಹ ಸುಖ ಕಂಡಿಲ್ಲ ಎಂದು ದೇವೇಗೌಡ ತಮ್ಮ ಕುಟುಂಬ ಸದಸ್ಯರ ನೆನಪಿಸಿಕೊಂಡು ಭಾವುಕರಾದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments