Select Your Language

Notifications

webdunia
webdunia
webdunia
webdunia

ಚುನಾವಣೆ ವೆಚ್ಚಕ್ಕೆ ಹಣವಿಲ್ಲದೇ ಜೆಡಿಎಸ್ ಅಭ್ಯರ್ಥಿ ಶಿವಾನಂದ ನಾಯ್ಕ್ ನಾಮಪತ್ರ ವಾಪಸ್

ಚುನಾವಣೆ ವೆಚ್ಚಕ್ಕೆ ಹಣವಿಲ್ಲದೇ ಜೆಡಿಎಸ್ ಅಭ್ಯರ್ಥಿ ಶಿವಾನಂದ ನಾಯ್ಕ್ ನಾಮಪತ್ರ ವಾಪಸ್
, ಶನಿವಾರ, 29 ಮಾರ್ಚ್ 2014 (16:05 IST)
PR
PR
ಬೆಂಗಳೂರು: ಜೆಡಿಎಸ್ ಮುಖಂಡ ಕುಮಾರಸ್ವಾಮಿ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್ ವಿರುದ್ಧ ಮುನಿಸಿಕೊಂಡ ಶಿವಾನಂದ್ ನಾಯ್ಕ್ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಅವರು, ಕುಮಾರಸ್ವಾಮಿ, ಮಧುಬಂಗಾರಪ್ಪ ತಮ್ಮ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ನಾಮಪತ್ರವನ್ನು ಹಿಂತೆಗೆದುಕೊಂಡರು. ಜೆಡಿಎಸ್ ನಾಯಕರಿಂದ ತಮಗೆ ಸೂಕ್ತ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಹೇಳಿ ಶಿವಾನಂದ ನಾಯ್ಕ್ ಮುನಿಸಿಕೊಂಡಿದ್ದರು.

ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಜೆಡಿಎಸ್ ಮಾತಿಗೆ ಬೆಲೆಕೊಟ್ಟು ಅಭ್ಯರ್ಥಿಯಾಗಿ ಸೇರಿದೆ. ಆದರೆ ಜೆಡಿಎಸ್ ನಾಯಕರು ತಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಹೇಳಿದ್ದಾರೆ. ಚುನಾವಣೆ ಖರ್ಚು, ವೆಚ್ಚಗಳ ಆರ್ಥಿಕ ಹೊರೆ ಹೊರುವುದಕ್ಕೆ ತಮಗೆ ಆಗುವುದಿಲ್ಲವಾದ್ದರಿಂದ ತಾನು ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು.

Share this Story:

Follow Webdunia kannada