Webdunia - Bharat's app for daily news and videos

Install App

ಚುನಾವಣೆಗೆ ತಿಳಿ ಹಾಸ್ಯದ ಸ್ಪರ್ಶ ನೀಡಿದ ಪ್ರಸಂಗಗಳು

Webdunia
ಶುಕ್ರವಾರ, 18 ಏಪ್ರಿಲ್ 2014 (18:39 IST)
PR
PR
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನದ ಗಂಭೀರತೆಯ ನಡುವೆ ಮತದಾನದ ನಿಯಮ ಬದಲಾವಣೆ, ತಪ್ಪು ಕೈಗೆ ಅಥವಾ ಬೆರಳಿಗೆ ಶಾಯಿ ಹಚ್ಚಿದ್ದು, ಆಧಾರ್ ಕಾರ್ಡ್‌ ಸಮಸ್ಯೆಗಳು, ಚುನಾವಣಾಧಿಕಾರಿಗೆ ಪಾಠ ಮುಂತಾದ ಪ್ರಸಂಗಗಳು ಚುನಾವಣೆಗೆ ತಿಳಿ ಹಾಸ್ಯದ ಸ್ಪರ್ಶವನ್ನು ನೀಡಿತು.158ನೇ ಮತಗಟ್ಟೆಯಲ್ಲಿ 15 ಮತದಾರರಿಗೆ ಅವರ ಬಲಗೈ ಹೆಬ್ಬೆಟ್ಟಿಗೆ ಶಾಯಿ ಹಚ್ಚಿದ ಘಟನೆ ನಡೆಯಿತು. ಇದು ಚುನಾವಣೆ ಸಿಬ್ಬಂದಿಯ ಅಜ್ಞಾನದಿಂದ ಉಂಟಾಗಿತ್ತು. ಹವ್ಯಾಸಿ ಪತ್ರಕರ್ತರೊಬ್ಬರಿಗೆ ತಪ್ಪಾಗಿ ಶಾಯಿ ಅದ್ದಿದ ಬೆರಳನ್ನು ವ್ಯಕ್ತಿಯೊಬ್ಬ ತೋರಿಸಿದಾಗ ಘಟನೆ ಬೆಳಕಿಗೆ ಬಂತು.ಹಂಡೇಲು ಮತಗಟ್ಟೆಯಲ್ಲಿ ಧನಕೀರ್ತಿ ಬಾಲಿಪಾ ಎಂಬವರು ಆಧಾರ್ ಕಾರ್ಡ್ ಹಿಡಿದುಕೊಂಡು ಬಂದಿದ್ದರು.

ಆದರೆ ಅಲ್ಲಿನ ಅಧಿಕಾರಿ ಆಧಾರ್ ಕಾರ್ಡ್ ಪ್ರೂಫ್ ಚುನಾವಣೆಗೆ ಅರ್ಹತೆ ಪಡೆದಿಲ್ಲ ಎಂದು ಹೇಳಿದಾಗ ಕೋಪಗೊಂಡ ಮತದಾರ ಮನೆಗೆ ಹೋಗಿ ಇನ್ನೊಂದು ಗುರುತಿನ ಸಾಕ್ಷ್ಯವನ್ನು ತಂದರು.ಚುನಾವಣಾಧಿಕಾರಿಗಳ ಮತದಾರರ ಪಟ್ಟಿಯಲ್ಲಿ ತಾವು ಸತ್ತಿರುವುದಾಗಿ ನಮೂದಿಸಿರುವುದನ್ನು ನೋಡಿ ಕೆಲವು ಮತದಾರಿಗೆ ಶಾಕ್ ಉಂಟಾಯಿತು. ಚುನಾವಣಾಧಿಕಾರಿ ನೀವು ಸತ್ತುಹೋಗಿದ್ದೀರಿ, ನಿಮಗೆ ಮತಹಾಕಲು ಅವಕಾಶವಿಲ್ಲ ಎಂದಾಗ ಮತದಾರರು ದಿಗ್ಬ್ರಾಂತರಾದರು. ಇದರಿಂದ ಮತದಾರರು ಮಾತಿನಚಕಮಕಿಗೆ ಇಳಿದಾಗ ಅಧಿಕಾರಿಗಳು ಮತದಾರರಿಂದ ಲಿಖಿತ ಹೇಳಿಕೆ ಬರೆಸಿಕೊಂಡು ಮತದಾನಕ್ಕೆ ಅವಕಾಶ ನೀಡಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments