Select Your Language

Notifications

webdunia
webdunia
webdunia
webdunia

'ಚಾಮಯ್ಯ ಮೇಷ್ಟ್ರು' ಕೆ.ಎಸ್.ಅಶ್ವತ್ಥ್ ದೇಹಸ್ಥಿತಿ ವಿಷಮ

'ಚಾಮಯ್ಯ ಮೇಷ್ಟ್ರು' ಕೆ.ಎಸ್.ಅಶ್ವತ್ಥ್ ದೇಹಸ್ಥಿತಿ ವಿಷಮ
ಮೈಸೂರು , ಗುರುವಾರ, 14 ಜನವರಿ 2010 (10:53 IST)
ಹಿರಿಯ ನಟ, 'ನಾಗರಹಾವು' ಚಿತ್ರದ 'ಚಾಮಯ್ಯ ಮೇಷ್ಟ್ರು' ಖ್ಯಾತಿಯ ಕೆ.ಎಸ್.ಅಶ್ವತ್ಥ್ ಅವರು ತೀವ್ರ ಅಸ್ವಸ್ಥರಾಗಿದ್ದು, ಅವರ ದೇಹ ಸ್ಥಿತಿ ವಿಷಮಿಸಿದೆ ಎಂದು ಮೂಲಗಳು ತಿಳಿಸಿವೆ.

ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶ್ವತ್ಥ್, ಮೆದುಳಿನ ನರದ ತೊಂದರೆಯಿಂದ ಬಳಲುತ್ತಿದ್ದಾರೆ. ಅಶ್ವತ್ಥ್ ಕುಟುಂಬಕ್ಕೆ ಚಿಕಿತ್ಸೆಯ ಹಣ ಹೊಂದಿಸುವುದು ಕೂಡ ಸಮಸ್ಯೆಯಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಅಶ್ವತ್ಥ್ ಈಗ ದ್ರವಾಹಾರ ಮಾತ್ರವೇ ಸೇವಿಸುವ ಸ್ಥಿತಿಯಲ್ಲಿದ್ದಾರೆ. ಸ್ವತಃ ತನ್ನ ಪತ್ನಿಯನ್ನೇ ಗುರುತಿಸಲಾಗದಷ್ಟು ಆರೋಗ್ಯ ಹದಗೆಟ್ಟಿತ್ತು. ಇತ್ತೀಚೆಗೆ ಅಶ್ವತ್ಥ್ ಅವರು ಯಾವುದೇ ಚಿತ್ರಗಳಲ್ಲಿ ನಟಿಸುತ್ತಿರಲಿಲ್ಲ. ಈ ಹಿಂದೆಯೇ ಮೆದುಳು ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದ ಅವರು ಆಗಾಗ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗುತ್ತಿತ್ತು.

ಚಿತ್ರರಂಗದಲ್ಲಿನ ಇವರ ಸೇವೆಗೆ ತುಮಕೂರು ವಿವಿಯ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅಶ್ವತ್ಥ್ ಭಾಜನರಾಗಿದ್ದರು. ಡಾ.ವಿಷ್ಣುವರ್ಧನ್ ಜೊತೆಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಅಶ್ವತ್ಥ್, ಇತ್ತೀಚೆಗೆ ಡಾ.ವಿಷ್ಣು ಅವರ ನಿಧನದಿಂದ ತೀವ್ರ ನೊಂದಿದ್ದರು ಎನ್ನಲಾಗಿದೆ.

Share this Story:

Follow Webdunia kannada