Select Your Language

Notifications

webdunia
webdunia
webdunia
webdunia

ಚಳಿಗಾಲದ ಅಧಿವೇಶನಕ್ಕೆ ಸುವರ್ಣಸೌಧದಲ್ಲಿ ಭರ್ಜರಿ ತಯಾರಿ

ಚಳಿಗಾಲದ ಅಧಿವೇಶನಕ್ಕೆ ಸುವರ್ಣಸೌಧದಲ್ಲಿ ಭರ್ಜರಿ ತಯಾರಿ
, ಬುಧವಾರ, 20 ನವೆಂಬರ್ 2013 (20:25 IST)
PR
PR
ಬೆಳಗಾವಿ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ಇನ್ನೈದು ದಿನಗಳು ಬಾಕಿವುಳಿದಿದ್ದು, ಸುವರ್ಣ ವಿಧಾನಸೌಧದಲ್ಲಿ ಭರ್ಜರಿ ತಯಾರಿ ನಡೆಸಲಾಗಿದೆ. ಇದೇ ತಿಂಗಳ 25ರಿಂದ ಡಿಸೆಂಬರ್ 5ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದೆ. ಇಂದು ವಿಧಾನಪರಿಷತ್ ಸಭಾಪತಿ ಶಂಕರಮೂರ್ತಿ ಬೆಳಗಾವಿಗೆ ಭೇಟಿ ನೀಡಿ ಸಿದ್ಥತೆಗಳ ಪರಿಶೀಲನೆ ನಡೆಸಿದರು. ಉತ್ತರಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತದೆ ಎಂದು ಶಂಕರಮೂರ್ತಿ ಹೇಳಿದರು.

ಸಚಿವರು, ಶಾಸಕರು, ಅಧಿಕಾರಿಗಳ ಕೋಣೆಗಳನ್ನು ಸಿದ್ದಗೊಳಿಸಲಾಗುತ್ತಿದ್ದು, ಹೊರಗಿನಿಂದ ಬರುವವರಿಗೆ ಊಟ, ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣಸೌಧಕ್ಕೆ ಹೊಸ ಕಳೆಬಂದಿದ್ದು, ಇನ್ನೈದು ದಿನಗಳಲ್ಲಿ ಸುವರ್ಣಸೌಧ ಇಡೀ ರಾಜ್ಯದ ಗಮನವನ್ನು ಕೇಂದ್ರೀಕರಿಸಲಿದೆ.

Share this Story:

Follow Webdunia kannada