Select Your Language

Notifications

webdunia
webdunia
webdunia
webdunia

ಚಲ್ಲಾ ಕೊಲೆ ಪ್ರಕರಣ: ಆರೋಪಿಗಳ ಬಂಧನ

ಚಲ್ಲಾ ಕೊಲೆ ಪ್ರಕರಣ: ಆರೋಪಿಗಳ ಬಂಧನ
ಗೌರಿಬಿದನೂರು , ಶುಕ್ರವಾರ, 21 ನವೆಂಬರ್ 2008 (15:42 IST)
ನವೆಂಬರ್ 10 ರಂದು ಕೊಲೆಯಾದ ಖ್ಯಾತ ಪರಿಸರವಾದಿ ಚಲ್ಲಾ ಕೃಷ್ಣಮೂರ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ನಡೆದು ಎರಡು ದಿನಗಳ ನಂತರ ಪೊಲೀಸರು ಶಂಕಿತ ಆರೋಪಿ ಭೀಮಪ್ಪನನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದರು. ಉಳಿದವರ ಮಾಹಿತಿ ತಿಳಿದ ತಕ್ಷಣ ಗೌರಿಬಿದನೂರು ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀನಿವಾಸಮೂರ್ತಿ ಬೆಂಗಳೂರು ಗ್ರಾಮೀಣ ಪ್ರದೇಶದ ದೇವನಹಳ್ಳಿ-ಬೂದಿಗೆರೆ ಕ್ರಾಸ್ ಬಳಿ ನಾಲ್ವರನ್ನು ಬಂಧಿಸಿರುವುದಾಗಿ ಹೇಳಿದ್ದಾರೆ.

ಕೃಷ್ಣಮೂರ್ತಿಯವರ ಮೊಬೈಲ್ ಮತ್ತು ವೀಡಿಯೋ ಕ್ಯಾಮರಾವನ್ನೂ ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ. ಈ ಕೃತ್ಯಕ್ಕೆ ಬಳಸಿದ್ದಾರೆ ಎನ್ನಲಾದ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Share this Story:

Follow Webdunia kannada