Select Your Language

Notifications

webdunia
webdunia
webdunia
webdunia

ಗೆಲುವಿನ ಸಂಭ್ರಮ; ಮೊಬೈಲ್ ಕಳೆದುಕೊಂಡ ರೇಣುಕಾಚಾರ್ಯ!

ಗೆಲುವಿನ ಸಂಭ್ರಮ; ಮೊಬೈಲ್ ಕಳೆದುಕೊಂಡ ರೇಣುಕಾಚಾರ್ಯ!
ಬೆಂಗಳೂರು , ಶುಕ್ರವಾರ, 30 ಸೆಪ್ಟಂಬರ್ 2011 (11:56 IST)
ಕೊಪ್ಪಳ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಜಯಭೇರಿ ಬಾರಿಸಿದ ಹಿನ್ನಲೆಯಲ್ಲಿ ನಗರದ ರೇಸ್‌ಕೋರ್ಸ್‌ನಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದ ಮುಂಭಾಗದಲ್ಲಿ ಸಂಭ್ರಮಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲೇ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಜೇಬಿಗೆ ಕತ್ತರಿ ಹಾಕಿ ಮೊಬೈಲ್ ಕದ್ದಿರುವ ಘಟನೆ ನಡೆದಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕೊಪ್ಪಳ ಚುನಾವಣೆಯಲ್ಲಿ ಕರಡಿ ಸಂಗಣ್ಣ ಗೆಲುವು ಸಾಧಿಸಿದ್ದ ಖುಷಿಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಚಿವ ರೇಣುಕಾಚಾರ್ಯ ಅವರನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಕುಣಿಯುತ್ತಿದ್ದರು. ಏತನ್ಮಧ್ಯೆ ರೇಣುಕಾಚಾರ್ಯ ಅವರ ಜೇಬಿಗೆ ಕತ್ತರಿ ಹಾಕಿದ ಮಹಾಶಯ 50 ಸಾವಿರ ರೂಪಾಯಿ ಮೌಲ್ಯದ ಐಫೋನ್ ಅನ್ನೇ ಕದ್ದುಬಿಟ್ಟಿದ್ದರು.

ಅಂತೂ ಕುಣಿದು-ಕುಪ್ಪಳಿಸಿದ ನಂತರ ಮೊಬೈಲ್‌ಗಾಗಿ ತಡಕಾಡಿದ ಸಚಿವರು ಹೌಹಾರಿ ಬಿಟ್ಟಿದ್ದರು. ಜೇಬಿನಲ್ಲಿದ್ದ ಮೊಬೈಲ್ ನಾಪತ್ತೆಯಾಗಿತ್ತು. ಕೂಡಲೇ ಮೊಬೈಲ್‌ಗೆ ಕರೆ ಮಾಡಿದರೂ ಕೂಡ ಸ್ವಿಚ್ ಆಫ್ ಆಗಿತ್ತು. ಅಂತೂ ಸಚಿವರು ಮೊಬೈಲ್ ಕಳವು ಆಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಮೊಬೈಲ್ ಪತ್ತೆ ಹಚ್ಚಲು ಅಧಿಕಾರಿಗಳು ಸಿಸಿಟಿವಿ ನೆರವು ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಎಲ್ಲೇ ಹೋದರು ತಮ್ಮ ವಿಚಿತ್ರ ವರ್ತನೆಯಿಂದ ಹೆಸರಾಗಿರುವ ರೇಣುಕಾಚಾರ್ಯ ಇದೀಗ ಮೊಬೈಲ್ ಕಳೆದುಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

ರೇಣುಕಾಚಾರ್ಯ ಜೇಬಿಗೆ ಕಚತ್ತರೆ ಐಫೋನ್ 50 ಸಾವಿರ ಮೌಲ್ಯದ ಕಳವು. ಕೊಪ್ಪಳ ಚುನಾವಣೆ ಗೆಲುವಿನ ಸಂಭ್ರಮಾಚರಣೆ ವೇಳೆ. ಎಂಪಿ ರೇಣುಕಾಚಾರ್ಯ ಜೇಬಿಗೆ ಕತ್ತರಿ. ಮೊಬೈಲ್, ರೇಸ್ ಕೋರ್ಸ್ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಎತ್ತಿ ಕುಣಿಯುತ್ತಿದ್ದ ಸಂದರ್ಭದಲ್ಲಿ, ಕೊಪ್ಪಳದಲ್ಲಿ ಬಿಜೆಪಿ ಗೆಲುವು ಹಿನ್ನಲೆ.

Share this Story:

Follow Webdunia kannada