Select Your Language

Notifications

webdunia
webdunia
webdunia
webdunia

ಗಣೇಶನಿಗೆ ನೈಸರ್ಗಿಕ ಬಣ್ಣವೇ ಇರಲಿ

ಗಣೇಶನಿಗೆ ನೈಸರ್ಗಿಕ ಬಣ್ಣವೇ ಇರಲಿ
ಬೆಂಗಳೂರು , ಶನಿವಾರ, 25 ಆಗಸ್ಟ್ 2007 (12:20 IST)
ಈ ಬಾರಿಯ ಗೌರಿ ಗಣೇಶನಿಗೆ ನೈಸರ್ಗಿಕ ಬಣ್ಣವೇ ಇರಲಿ ಎಂದು ನಗರದ ಪರಿಸರ ಜಾಗೃತಿ ಸಂಘ -ಸಂಸ್ಥೆಗಳು ಅಭಿಯಾನ ಆರಂಭಿಸಿವೆ. ನಗರದೆಲ್ಲೆಡೆ ಬೀದಿ ಬದಿಯ ಮೂರ್ತಿಗಳ ಮಾರಾಟ ಭರದಿಂದ ನಡೆಯುತ್ತಿದ್ದು, ಮಾರಾಟಗಾರರು ಪರಿಸರಕ್ಕೆ ತೊಂದರೆಯಾಗುವ ಬಣ್ಣಗಳನ್ನು ಬಳಸಬಾರದು ಎಂದು ಮನವಿ ಮಾಡಿವೆ.

ವಿಗ್ರಹಕ್ಕೆ ಬಳಿಯುವ ಕೆಲವು ಬಣ್ಣಗಳು ಪರಿಸರಕ್ಕೆ ತುಂಬಾ ಮಾರಕವಾಗಿವೆ. ಈ ಹಿನ್ನೆಲೆಯಲ್ಲಿ ಬಣ್ಣ ರಹಿತ ಗಣೇಶನ ಮಾರಾಟಕ್ಕೆ ಕೆಲ ಸಂಸ್ಥೆಗಳು ಪ್ರಚಾರ ಆರಂಭಿಸಿವೆ. ಈ ಸಂಬಂಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿರುವ ಸಂಘ ಸಂಸ್ಥೆಗಳು ವಿದ್ಯಾರ್ಥಿಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸುತ್ತಿವೆ.

ಬೆಂಗಳೂರಿನಲ್ಲಿ ಲಕ್ಷ ಸಂಖ್ಯೆಯಲ್ಲಿ ಗಣೇಶ ವಿಗ್ರಹ ಮಾರಾಟ ನಡೆಯುತ್ತಿದ್ದು ಈಗಾಗಲೇ ಕಲಾವಿದರು ತಯಾರಿಯಲ್ಲಿ ನಿರತರಾಗಿದ್ದಾರೆ. ಅಪಾಯಕಾರೀ ಸೀಸದ ಬಳಕೆಯನ್ನು ವಿಗ್ರಹ ತಯಾರಕರು ಮಾಡಬಾರದು ಎಂದು ವಿವಿಧ ಸಂಸಘ ಸಂಸ್ಥೆಗಳು ಕೇಳಿಕೊಂಡಿವೆ.

Share this Story:

Follow Webdunia kannada