Select Your Language

Notifications

webdunia
webdunia
webdunia
webdunia

ಕೋಪಗೊಂಡು ಸಭಾತ್ಯಾಗ ಮಾಡಿದ ಮರಿತಿಬ್ಬೇಗೌಡ

ಕೋಪಗೊಂಡು ಸಭಾತ್ಯಾಗ ಮಾಡಿದ ಮರಿತಿಬ್ಬೇಗೌಡ
, ಶುಕ್ರವಾರ, 24 ಜನವರಿ 2014 (12:09 IST)
PR
PR
ಬೆಂಗಳೂರು: ಪದವಿ ಹಾಗೂ ಇಂಜಿನಿಯರಿಂಗ್ ಪ್ರಾಧ್ಯಾಪಕರಿಗೆ 6ನೇ ವೇತನ ಆಯೋಗದ ಶಿಫಾರಸ್ಸು ಅನುಷ್ಠಾನಕ್ಕೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಇಂದು ವಿಧಾನಪರಿಷತ್ತಿನಲ್ಲಿ ಒತ್ತಾಯಿಸಿದರು. ಈ ಕುರಿತಂತೆ ಸಚಿವ ದೇಶಪಾಂಡೆ ಉತ್ತರಕ್ಕೆ ಮರಿತಿಬ್ಬೇಗೌಡ ತೃಪ್ತರಾಗಲಿಲ್ಲ.ಸರ್ಕಾರ ತಪ್ಪು ಉತ್ತರ ನೀಡುತ್ತಿದೆ ಎಂದು ಮರಿತಿಬ್ಬೇಗೌಡ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದಾಗ ಮರಿತಿಬ್ಬೇಗೌಡ ಅವರ ವರ್ತನೆಗೆ ಸ್ಪೀಕರ್ ಎಚ್ಚರಿಕೆ ನೀಡಿದರು.

ಮರಿತಿಬ್ಬೇಗೌಡ ಮತ್ತೆ ಮತ್ತೆ ಮಾತನಾಡತೊಡಗಿದಾಗ ಕುಳಿತುಕೊಳ್ಳುವಂತೆ ಸ್ಪೀಕರ್ ಕೂಗಿ ಹೇಳಿದರು. ಆಗ ಮರಿತಿಬ್ಬೇಗೌಡ ಕೋಪಗೊಂಡು ಸಭಾತ್ಯಾಗ ಮಾಡ್ತೇನೆ ಎಂದೇಳಿ ಹೊರಗೆಹೋಗುತ್ತಾ ಧಿಕ್ಕಾರ, ಧಿಕ್ಕಾರ ಎಂದು ಕೂಗಿದರು.

Share this Story:

Follow Webdunia kannada