Webdunia - Bharat's app for daily news and videos

Install App

ಕೊಬ್ಬಿದ ಗೂಳಿಯ ಹಾವಳಿ: ಅರಣ್ಯ ಇಲಾಖೆ ಸುಸ್ತೋ ಸುಸ್ತು

Webdunia
ಮಂಗಳವಾರ, 13 ಆಗಸ್ಟ್ 2013 (14:17 IST)
PR
PR
ಶ್ರೀರಂಗಪಟ್ಟಣ: ಗೂಳಿತಿಟ್ಟಿನಿಂದ ಬಾಬುರಾಯನಕೊಪ್ಪಲು ಗ್ರಾಮವೊಂದಕ್ಕೆ ನದಿಯಲ್ಲಿ ಕೊಚ್ಚಿಕೊಂಡು ಬಂದಿದ್ದ ಮದವೇರಿದ ಗೂಳಿಯೊಂದನ್ನು ಹಿಡಿಯುವಷ್ಟರಲ್ಲಿ ಅರಣ್ಯ ಇಲಾಖೆ ಸುಸ್ತೋ ಸುಸ್ತು. ಗೂಳಿ ಅವರಿಂದ ತಪ್ಪಿಸಿಕೊಂಡು ಅತ್ತಿಂದಿತ್ತ ಸುಮಾರು ಐದಾರು ಕಿಮೀ ದೂರದವರೆಗೆ ಅವರ ಕೈಗೆ ಸಿಗದೇ ಓಡಾಡಿತು. ಗ್ರಾಮದಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿದ್ದ ಗೂಳಿಗೆ ಬೇರೆ ದಾರಿ ತೋಚದೇ ಅರಿವಳಿಕೆ ಇಂಜೆಕ್ಷನ್ ನೀಡಿದ ನಂತರ ಇಂಜೆಕ್ಷನ್ ಪ್ರಭಾವದಿಂದ ಕುಸಿದುಬಿತ್ತು.

ನಂತರ ಕಾಲುಗಳಿಗೆ ಹಗ್ಗ ಕಟ್ಟಿ ಟ್ರಾಕ್ಟರ್ ಮೂಲಕ ಸಾಗಿಸಿ ,ರಂಗನತಿಟ್ಟಿನ ಪಕ್ಷಿಧಾಮದ ಸಮೀಪವಿರುವ ಗೂಳಿತಿಟ್ಟಿನಲ್ಲಿ 15ರಿಂದ 20 ಮದವೇರಿದ ಗೂಳಿಗಳಿದ್ದು ಅವುಗಳ ಜತೆ ಈ ಗೂಳಿಯನ್ನು ಸಹ ಬಿಡಲಾಯಿತು. ರಂಗನತಿಟ್ಟು ಪಕ್ಷಿಧಾಮ ಪ್ರವಾಹದ ನೀರಿನಿಂದ ಆಂಶಿಕವಾಗಿ ಮುಳುಗಿದಾಗ ಗೂಳಿತಿಟ್ಟು ಸಹ ಮುಳುಗಿತ್ತು. ಈ ಹಿನ್ನೆಲೆಯಲ್ಲಿ ಗೂಳಿತಿಟ್ಟಿನಿಂದ ಹೊರಕ್ಕೆ ಬಂದಿದ್ದ ಗೂಳಿ ನದಿಯ ನೀರಿನಲ್ಲಿ ಕೊಚ್ಚಿಕೊಂಡು ಬಂದಿತ್ತು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments