Select Your Language

Notifications

webdunia
webdunia
webdunia
webdunia

"ಕೈ'' ಪಾಲಾದ ಮತ್ತೊಂದು ಶಾಸಕ ಸ್ಥಾನ: ಬೀಗಿದ ಸಿದ್ದು

ಬೆಂಗಳೂರು , ಶುಕ್ರವಾರ, 31 ಮೇ 2013 (11:35 IST)
PR
PR
ಸಿದ್ದರಾಮಯ್ಯನವರಮುಖ್ಯಮಂತ್ರಿಯಾನಂತನಡೆಮೈಸೂರು ಜಿಲ್ಲೆ ಪಿರಿಯಾಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ವೆಂಕಟೇಶ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ಮಹಾದೇವ್ ಅವರನ್ನು 2,088 ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಜಯಶಾಲಿಯಾಗಿದ್ದಾರೆ. ಫಲಿತಾಂಶದಿಂದಾಗಿ ಸಿದ್ದರಾಮಯ್ಯಪ್ರತಿಷ್ಟಇನ್ನಷ್ಟಹೆಚ್ಚಿದಂತಾಗಿದೆ.

ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಜೆಡಿಎಸ್‌ನ ಮಹಾದೇವ್ ಐದನೇ ಸುತ್ತಿನ ಮತ ಎಣಿಕೆ ವೇಳೆಗೆ ಹಿನ್ನಡೆ ಸಾಧಿಸಿದ್ದರು. ಅಂತಿಮವಾಗಿ ಕಾಂಗ್ರೆಸ್‌ನ ಕೆ. ವೆಂಕಟೇಶ್ 60,054 ಮತಗಳನ್ನು ಪಡೆದರೆ ಜೆಡಿಎಸ್ ನ ಮಹಾದೇವ್ 59,957 ಮತಗಳನ್ನು ಗಳಿಸಿದರು.

ಇನ್ನುಳಿದಂತೆ ಬಿಜೆಪಿ, ಕೆಜೆಪಿ ಹಾಗೂ ಬಿಎಸ್ಆರ್ ಪಕ್ಷದ ಅಭ್ಯರ್ಥಿಗಳು ಕನಿಷ್ಟ ಮತಗಳನ್ನು ಗಳಿಸಿದ್ದಾರೆ. ನಾಲ್ಕನೇ ಸ್ಥಾನ ಪಡೆದಿರುವ ಬಿಜೆಪಿ ಅಭ್ಯರ್ಥಿ ಠೇವಣಿಯನ್ನೂ ಕಳೆದುಕೊಂಡಿದ್ದಾರೆ. ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಗೆಲ್ಲುವುದರೊಂದಿಗೆ ಕಾಂಗ್ರೆಸ್ ಶಾಸಕರ ಸಂಖ್ಯೆ 122 ಕ್ಕೇರಿದಂತಾಗಿದೆ.

Share this Story:

Follow Webdunia kannada