Webdunia - Bharat's app for daily news and videos

Install App

ಕೈಗಳನ್ನು ಕಟ್ಟಿ ಹಾಕಿ ವಿವಸ್ತ್ರಗೊಳಿಸಿದರು, ಮರ್ಮಾಂಗಕ್ಕೆ ಒದ್ದರು

Webdunia
ಮಂಗಳವಾರ, 1 ಏಪ್ರಿಲ್ 2014 (10:59 IST)
ಬಂಟ್ವಾಳ: ತಮ್ಮ ಕೋಮಿನ ಯುವತಿ ಜತೆ ಮಾತನಾಡಿದ್ದಕ್ಕೆ 50 ಜನರ ತಂಡ ಯುವಕನೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬಂಟವಾಳ ತಾಲೂಕಿನ ಗಡಿಯಾರ ಗ್ರಾಮದಲ್ಲಿ ನಡೆದಿದೆ. ಜಯರಾಂ ಎಂಬ ಯುವಕನ ಮೇಲೆ ಹಲ್ಲೆ ಮಾಡಿ, ಕೈಗಳನ್ನು ಕಟ್ಟಿಹಾಕಿ ವಿವಸ್ತ್ರಗೊಳಿಸಿದರು ಮತ್ತು ಮನಬಂದಂತೆ ಥಳಿಸಿ, ಮರ್ಮಾಂಗಕ್ಕೆ ಒದ್ದು ಘಾಸಿಗೊಳಿಸಿ ಅವನ ಮೈಮೇಲೆ ಹತ್ತಿ ತುಳಿದು ಅಟ್ಟಹಾಸ ಮೆರೆದಿದ್ದರು. ನಂತರ ಅವನು ಮೂರ್ಛೆ ತಪ್ಪಿಬಿದ್ದಾಗ ಸತ್ತೇಹೋಗಿದ್ದಾನೆಂದು ಎಣಿಸಿ ಚರಂಡಿಗೆ ಎಸೆದುಹೋಗಿದ್ದರು.

ಬೇರೆ ಕೋಮಿನ ಯುವತಿಯೊಬ್ಬಳ ಜತೆ ಜಯರಾಂ ಮಾತನಾಡುತ್ತಾ ನಿಂತಿದ್ದನ್ನು ಕಂಡ ಅದೇ ಕೋಮಿನ ಯುವಕರ ಗುಂಪು ಈ ಮಾರಣಾಂತಿಕ ಹಲ್ಲೆ ನಡೆಸಿದೆ. ಈ ಘಟನೆಯ ಹಿಂದೆ ಒಂದು ಸಂಘಟನೆಯ ಆರೋಪ ಕೇಳಿಬರ್ತಿದೆ. ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಕೇವಲ ನಾಲ್ಕು ಮಂದಿಯನ್ನು ಮಾತ್ರ ಬಂಧಿಸಿದ್ದಾರೆ. ಉಳಿದವರು ತಲೆತಪ್ಪಿಸಿಕೊಂಡಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments