Select Your Language

Notifications

webdunia
webdunia
webdunia
webdunia

ಕೈಗಳನ್ನು ಕಟ್ಟಿ ಹಾಕಿ ವಿವಸ್ತ್ರಗೊಳಿಸಿದರು, ಮರ್ಮಾಂಗಕ್ಕೆ ಒದ್ದರು

ಕೈಗಳನ್ನು ಕಟ್ಟಿ ಹಾಕಿ ವಿವಸ್ತ್ರಗೊಳಿಸಿದರು, ಮರ್ಮಾಂಗಕ್ಕೆ ಒದ್ದರು
, ಮಂಗಳವಾರ, 1 ಏಪ್ರಿಲ್ 2014 (10:59 IST)
ಬಂಟ್ವಾಳ: ತಮ್ಮ ಕೋಮಿನ ಯುವತಿ ಜತೆ ಮಾತನಾಡಿದ್ದಕ್ಕೆ 50 ಜನರ ತಂಡ ಯುವಕನೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬಂಟವಾಳ ತಾಲೂಕಿನ ಗಡಿಯಾರ ಗ್ರಾಮದಲ್ಲಿ ನಡೆದಿದೆ. ಜಯರಾಂ ಎಂಬ ಯುವಕನ ಮೇಲೆ ಹಲ್ಲೆ ಮಾಡಿ, ಕೈಗಳನ್ನು ಕಟ್ಟಿಹಾಕಿ ವಿವಸ್ತ್ರಗೊಳಿಸಿದರು ಮತ್ತು ಮನಬಂದಂತೆ ಥಳಿಸಿ, ಮರ್ಮಾಂಗಕ್ಕೆ ಒದ್ದು ಘಾಸಿಗೊಳಿಸಿ ಅವನ ಮೈಮೇಲೆ ಹತ್ತಿ ತುಳಿದು ಅಟ್ಟಹಾಸ ಮೆರೆದಿದ್ದರು. ನಂತರ ಅವನು ಮೂರ್ಛೆ ತಪ್ಪಿಬಿದ್ದಾಗ ಸತ್ತೇಹೋಗಿದ್ದಾನೆಂದು ಎಣಿಸಿ ಚರಂಡಿಗೆ ಎಸೆದುಹೋಗಿದ್ದರು.

ಬೇರೆ ಕೋಮಿನ ಯುವತಿಯೊಬ್ಬಳ ಜತೆ ಜಯರಾಂ ಮಾತನಾಡುತ್ತಾ ನಿಂತಿದ್ದನ್ನು ಕಂಡ ಅದೇ ಕೋಮಿನ ಯುವಕರ ಗುಂಪು ಈ ಮಾರಣಾಂತಿಕ ಹಲ್ಲೆ ನಡೆಸಿದೆ. ಈ ಘಟನೆಯ ಹಿಂದೆ ಒಂದು ಸಂಘಟನೆಯ ಆರೋಪ ಕೇಳಿಬರ್ತಿದೆ. ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಕೇವಲ ನಾಲ್ಕು ಮಂದಿಯನ್ನು ಮಾತ್ರ ಬಂಧಿಸಿದ್ದಾರೆ. ಉಳಿದವರು ತಲೆತಪ್ಪಿಸಿಕೊಂಡಿದ್ದಾರೆ.

Share this Story:

Follow Webdunia kannada