Select Your Language

Notifications

webdunia
webdunia
webdunia
webdunia

ಕೇಜ್ರಿವಾಲ್ ರಾಜೀನಾಮೆ ಮೂಲಕ ರಾಜಕೀಯ ನಾಟಕ: ಖರ್ಗೆ ಆರೋಪ

ಕೇಜ್ರಿವಾಲ್ ರಾಜೀನಾಮೆ ಮೂಲಕ ರಾಜಕೀಯ ನಾಟಕ: ಖರ್ಗೆ ಆರೋಪ
, ಭಾನುವಾರ, 16 ಫೆಬ್ರವರಿ 2014 (13:08 IST)
PR
PR
ಬೆಂಗಳೂರು: ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ರಾಜೀನಾಮೆ ನೀಡುವ ಮೂಲಕ ರಾಜಕೀಯ ನಾಟಕವಾಡ್ತಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಕೇಜ್ರಿವಾಲ್ ತಮ್ಮಷ್ಟಕ್ಕೆ ತಾವೇ ಬುದ್ಧಿವಂತ ಅಂತ ತಿಳ್ಕೊಂಡಿದ್ದಾರೆ. ಅವರು ನೀಡಿದ ವಾಗ್ದಾನಗಳನ್ನು ನೆರವೇರಿಸೋಕ್ಕೆ ಆಗಲಿಲ್ಲ. ಆದ್ದರಿಂದ ಜನಲೋಕಪಾಲ ನೆಪವನ್ನು ಇಟ್ಟುಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ದೊಡ್ಡ ರಾಜಕೀಯ ಡ್ರಾಮಾ ಮಾಡಿದ್ದಾರೆ ಎಂದು ಕೇಜ್ರಿವಾಲ್ ರಾಜೀನಾಮೆ ಬಗ್ಗೆ ಅವರು ಪ್ರತಿಕ್ರಿಯಿಸಿದರು.

ಅವರು ಕೇಜ್ರಿವಾಲ್ ಅಲ್ಲ, ಕ್ರೇಜಿವಾಲ್ ಎಂದೂ ವ್ಯಂಗ್ಯವಾಡಿದರು. ಕೇಜ್ರಿವಾಲ್ ಅವರು ಜನಲೋಕಪಾಲ್ ಮಸೂದೆ ದೆಹಲಿ ವಿಧಾನಸಭೆಯಲ್ಲಿ ಮಂಡನೆಯಾಗದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರಿಂದ ದೆಹಲಿ ಸರ್ಕಾರ ಪತನಗೊಂಡಿದೆ. ಈ ಹಿನ್ನೆಲೆಯಲ್ಲಿ ಖರ್ಗೆ ಪ್ರತಿಕ್ರಿಯೆ ಹೊರಬಿದ್ದಿದೆ.
.................

Share this Story:

Follow Webdunia kannada