Select Your Language

Notifications

webdunia
webdunia
webdunia
webdunia

ಕೇಜ್ರಿವಾಲ್ ದಾಖಲೆ ಬಿಡುಗಡೆ ಮಾಡ್ಲಿ: ಕುಮಾರಸ್ವಾಮಿ ಸವಾಲ್

ಕೇಜ್ರಿವಾಲ್ ದಾಖಲೆ ಬಿಡುಗಡೆ ಮಾಡ್ಲಿ: ಕುಮಾರಸ್ವಾಮಿ ಸವಾಲ್
ನವದೆಹಲಿ , ಶುಕ್ರವಾರ, 31 ಜನವರಿ 2014 (15:29 IST)
PR
PR
ಲೋಕಸಭೆ ಚುನಾವಣೆಯಲ್ಲಿ ಭ್ರಷ್ಟ ಸಂಸದರನ್ನು ಸೋಲಿಸಿ ಎಂದು ಕೆಲವು ಭ್ರಷ್ಟ ಮುಖಂಡರ ಹೆಸರನ್ನು ಕೇಜ್ರಿವಾಲ್ ಪ್ರಸ್ತಾಪಿಸಿರುವ ಬಗ್ಗೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಹೇಳಿಕೆ ಕೇಜ್ರಿವಾಲ್ ಅವರಿಗೆ ಶೋಭೆ ತರುವುದಿಲ್ಲ. ನನ್ನ ಹೆಸರನ್ನು ಲಘುವಾಗಿ ಬಳಸಿರುವುದು ಸರಿಯಲ್ಲ. ನನ್ನ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆರೋಪಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ ಎಂದು ಕುಮಾರಸ್ವಾಮಿ ಕೇಜ್ರಿವಾಲ್‌ಗೆ ಸವಾಲು ಹಾಕಿದ್ದಾರೆ. ಭ್ರಷ್ಟ ಮುಖಂಡರ ಪಟ್ಟಿಯಲ್ಲಿ ರಾಜ್ಯದ ನಾಲ್ವರ ಹೆಸರನ್ನು ಕೇಜ್ರಿವಾಲ್ ಪ್ರಸ್ತಾಪಿಸಿದ್ದು, ಅವರಲ್ಲಿ ಕುಮಾರಸ್ವಾಮಿ, ಯಡಿಯೂರಪ್ಪ, ವೀರಪ್ಪ ಮೊಯ್ಲಿ, ಅನಂತಕುಮಾರ್ ಸೇರಿದ್ದಾರೆ.

webdunia
PR
PR
ಕೇಜ್ರಿವಾಲ್ ಹೇಳಿಕೆಯನ್ನು ಬಿಜೆಪಿ ಮುಖಂಡ ಸದಾನಂದ ಗೌಡ ಕೂಡ ಖಂಡಿಸಿದ್ದಾರೆ. ಕೇಜ್ರಿವಾಲ್ ಹೇಳಿಕೆಯಲ್ಲಿ ಪ್ರಬುದ್ಧತೆ ಇಲ್ಲ. ಭ್ರಷ್ಟ ಕಾಂಗ್ರೆಸ್ ಜತೆಗೂಡಿ ಕೇಜ್ರಿವಾಲ್ ಆಪ್ ಸರ್ಕಾರ ನಡೆಸುತ್ತಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಅರವಿಂದ್ ಕೇಜ್ರಿವಾಲ್ ನೈತಿಕ ಹಕ್ಕು ಹೊಂದಿಲ್ಲ ಎಂದು ಡಿವಿ ಸದಾನಂದ ಗೌಡ ಹೇಳಿದರು.

Share this Story:

Follow Webdunia kannada