Select Your Language

Notifications

webdunia
webdunia
webdunia
webdunia

ಕಾವೇರಿ ವಿವಾದ;ಉಪವಾಸ ಅಂತ್ಯಗೊಳಿಸಿದ ಮಾದೇಗೌಡ

ಕಾವೇರಿ ವಿವಾದ;ಉಪವಾಸ ಅಂತ್ಯಗೊಳಿಸಿದ ಮಾದೇಗೌಡ
ಮಂಡ್ಯ , ಗುರುವಾರ, 4 ಅಕ್ಟೋಬರ್ 2012 (19:38 IST)
PR
ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡಬಾರದು ಎಂದು ಆಗ್ರಹಿಸಿ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಗುರುವಾರ ಅಂತ್ಯಗೊಳಿಸಿದ್ದಾರೆ.

ಇಂದು ಸಂಜೆ ಹಣ್ಣಿನ ರಸ ಸೇವಿಸುವ ಮೂಲಕ ಅವರು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದು, ಕಾವೇರಿ ನೀರಿಗಾಗಿ ಹೋರಾಟ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.

ಬನ್ಸಾಲ್-ದೇವೇಗೌಡ ಭೇಟಿ:
ಕಾವೇರಿ ವಿವಾದ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಗುರುವಾರ ಕೇಂದ್ರ ಜಲಸಂಪನ್ಮೂಲ ಸಚಿವ ಪಿ.ಕೆ.ಬನ್ಸಾಲ್ ಅವರನ್ನು ಭೇಟಿ ಮಾಡಿದ್ದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾವೇರಿ ನೀರಿನ ವಸ್ತು ಸ್ಥಿತಿ ಬಗ್ಗೆ ಕೇಂದ್ರ ಸಚಿವರಿಗೆ ವಿವರಿಸಿದ್ದೇನೆ. ನಾನು ಯಾರ ವಿರುದ್ಧವೂ ಮಾತನಾಡುವುದಿಲ್ಲ. ಕಾವೇರಿ ಸಮಸ್ಯೆ ಪರಿಹಾರವಾಗಬೇಕು ಅಷ್ಟೇ ಎಂದು ಗೌಡರು ಹೇಳಿದರು.

Share this Story:

Follow Webdunia kannada