Select Your Language

Notifications

webdunia
webdunia
webdunia
webdunia

ಕಾವೇರಿ-ರಾಜಕಾರಣಿಗಳಿಂದ ಅನಗತ್ಯ ವಿವಾದ: ಸುತ್ತೂರುಶ್ರೀ

ಕಾವೇರಿ-ರಾಜಕಾರಣಿಗಳಿಂದ ಅನಗತ್ಯ ವಿವಾದ: ಸುತ್ತೂರುಶ್ರೀ
ಚಾಮರಾಜನಗರ , ಶುಕ್ರವಾರ, 6 ಏಪ್ರಿಲ್ 2012 (11:19 IST)
PR
ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನದಿ ನೀರಿನ ಸಮಸ್ಯೆ ಇಲ್ಲ. ಆದರೆ ಎರಡೂ ರಾಜ್ಯದ ರಾಜಕಾರಣಿಗಳೇ ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆರೋಪಿಸಿದರು.

ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿಗೆ ಸೇರಿದ ತಾಳವಾಡಿ ಗ್ರಾಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ತಾಳವಾಡಿ-ಫಿರ್ಕಾ ತಾಲೂಕು ಯೂನಿಯನ್ ಹಾಗೂ ಕನ್ನಡ ಪರ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಭಾಷಾ ಭಾವೈಕ್ಯ ಸಮಾವೇಶ ಮತ್ತು ಹೊರನಾಡ ಕನ್ನಡಿಗರ ಸಂಸ್ಕೃತಿ ಹಬ್ಬ ಕ್ರಾರ್ಯಕ್ರಮದಲ್ಲಿ ಮಾತನಾಡಿದರು.

ಭಾಷೆ ಅಭಿವ್ಯಕ್ತಿಯ ಮಾಧ್ಯಮ. ಅದು ಸಂಘರ್ಷದ ಸಂಕೇತವಾಗಬಾರದು. ನದಿ ನೀರು ವಿವಾದದಿಂದ ಭಾಷಾ ಸಾಮರಸ್ಯಕ್ಕೆ ಧಕ್ಕೆಯಾಗುವುದು ಸರಿಯಲ್ಲ. ತಾಳವಾಡಿಯಲ್ಲಿ ಕನ್ನಡಿಗರು ಹಾಗೂ ತಮಿಳು ಭಾಷಿಕರು ಅನೋನ್ಯವಾಗಿದ್ದಾರೆ. ಭಾಷಾ ಭಾವೈಕ್ಯಕ್ಕೆ ಇದಕ್ಕಿಂತ ನಿದರ್ಶನ ಬೇಕಿಲ್ಲ ಎಂದರು.

Share this Story:

Follow Webdunia kannada