Select Your Language

Notifications

webdunia
webdunia
webdunia
webdunia

ಕಾವೇರಿ ಕದನ; ನೂರಾರು ರೈತರ ವಿರುದ್ಧ ಎಫ್ಐಆರ್ ದಾಖಲು

ಕಾವೇರಿ ಕದನ; ನೂರಾರು ರೈತರ ವಿರುದ್ಧ ಎಫ್ಐಆರ್ ದಾಖಲು
ಮಂಡ್ಯ , ಶುಕ್ರವಾರ, 5 ಅಕ್ಟೋಬರ್ 2012 (13:28 IST)
PR
ಕೆಆರ್ಎಸ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ನೂರಾರು ರೈತರ ವಿರುದ್ಧ ಕೆಆರ್ಎಸ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಎಫ್ಐಆರ್ ದಾಖಲಿಸಲಾಗಿದೆ.

ಬ್ಯಾರಿಕೇಡ್ ಕಿತ್ತೆಸೆದು ಗದ್ದಲ ಮಾಡಿದ ಆರೋಪದ ಮೇಲೆ ನೂರಕ್ಕೂ ಅಧಿಕ ರೈತರ ವಿರುದ್ಧ ಪ್ರಕರಣ ದಾಖಲಾಗಿದೆ.

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ವಿರೋಧಿಸಿ ಬುಧವಾರ ಕೆಆರ್ಎಸ್‌ಗೆ ಮುತ್ತಿಗೆ ಹಾಕಿದ್ದ ರೈತರು ಸೇತುವೆ ಬಳಿಯ ದ್ವಾರದಲ್ಲಿ ಹಾಕಿದ್ದ ಬ್ಯಾರಿಕೇಡ್ ನದಿಗೆಸೆದು ಪೊಲೀಸರ ಪ್ರತಿರೋಧದ ನಡುವೆಯೂ ತಂತ ಬೇಲಿಯಿಂದ ನುಗ್ಗಲು ಯತ್ನಿಸಿದ್ದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆದಿದ್ದ ಕೆಆರ್ಎಸ್ ಚಲೋಗೆ ಸಮರೋಪಾದಿಯಲ್ಲಿ ಹರಿದು ಬಂದ ರೈತರು ಕೃಷ್ಣರಾಜ ಸಾಗರ ಜಲಾಶಯಕ್ಕೆ ಲಗ್ಗೆ ಹಾಕಿದ್ದರು. ವಿವಿಧೆಡೆಯಿಂದ ಆಗಮಿಸಿದ ಸುಮಾರು 20 ಸಾವಿರ ರೈತರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ ಅಣೆಕಟ್ಟೆಯೊಳಗೆ ನುಗ್ಗಲು ಯತ್ನಿಸಿದಾಗ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು.

Share this Story:

Follow Webdunia kannada