Select Your Language

Notifications

webdunia
webdunia
webdunia
webdunia

ಕಾಮಗಾರಿಗಳ ಗುಣಮಟ್ಟ ಸರಿಯಾಗಿಲ್ಲ: ಒಪ್ಪಿಕೊಂಡ ಸಿಎಂ

ಕಾಮಗಾರಿಗಳ ಗುಣಮಟ್ಟ ಸರಿಯಾಗಿಲ್ಲ: ಒಪ್ಪಿಕೊಂಡ ಸಿಎಂ
, ಗುರುವಾರ, 26 ಡಿಸೆಂಬರ್ 2013 (14:27 IST)
PR
PR
ಬೆಂಗಳೂರು: ಬೆಂಗಳೂರಿನಲ್ಲಿ ಕಾಮಗಾರಿಗಳ ವಿಳಂಬ ಗತಿಯಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಇನ್ನು ಕಾಮಗಾರಿಗಳ ಗುಣಮಟ್ಟವೂ ಸಹ ಸರಿಯಾಗಿ ಆಗುತ್ತಿಲ್ಲ . ಈ ವಿಷಯವನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸರ್ಕಾರದಲ್ಲಿ ಗುಣಮಟ್ಟದ ಕೆಲಸ ಆಗುತ್ತಿಲ್ಲವೆಂದು ಸ್ವತಃ ಸಿಎಂ ಒಪ್ಪಿಕೊಂಡರು. ಬಹಳಷ್ಟು ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ. ಕಾಮಗಾರಿಗಳಲ್ಲಿ ಉತ್ತಮ ಗುಣಮಟ್ಟ ನೀಡಲು ಗಮನಹರಿಸುತ್ತೇವೆ ಎಂದು ಸಿಎಂ ಹೇಳಿದರು.

ಹಿಂದಿನ ಸರ್ಕಾರದ ಕಾಮಗಾರಿಗಳ ಲೋಪದೋಷಗಳಿಂದ ನಾವು ಆರೋಪ ಎದುರಿಸುವ ಪರಿಸ್ಥಿತಿ ಉಂಟಾಗಿದೆ. ತ್ಯಾಜ್ಯ ವಿಲೇವಾರಿ, ಫ್ಲೈಓವರ್, ಅಂಡರ್ ಪಾಸ್ ಕಾಮಗಾರಿಯನ್ನು ಮುಗಿಸುತ್ತೇವೆ ಎಂದು ಸಿಎಂ ಹೇಳಿದರು.

Share this Story:

Follow Webdunia kannada