Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸೇರಲು ಬಿಎಸ್‌ವೈ ಸಿದ್ದರಾಗಿದ್ರು: ಲಕ್ಷ್ಮೀನಾರಾಯಣ ಬಾಂಬ್

ಕಾಂಗ್ರೆಸ್ ಸೇರಲು ಬಿಎಸ್‌ವೈ ಸಿದ್ದರಾಗಿದ್ರು: ಲಕ್ಷ್ಮೀನಾರಾಯಣ ಬಾಂಬ್
, ಶುಕ್ರವಾರ, 21 ಮಾರ್ಚ್ 2014 (16:36 IST)
PR
PR
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೂರು ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಸಿದ್ದವಾಗಿದ್ದರು ಎಂದು ಯಡಿಯೂರಪ್ಪ ಬಂಟರಲ್ಲಿ ಒಬ್ಬರಾಗಿದ್ದ ಎಂ.ಡಿ.ಲಕ್ಷ್ಮಿನಾರಾಯಣ ಬಾಂಬ್ ಸಿಡಿಸಿದ್ದಾರೆ.ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ನಿರೀಕ್ಷಿಸಿದಷ್ಟು ಸೀಟುಗಳನ್ನು ಪಡೆಯಲು ವಿಫಲವಾಗಿದ್ದರಿಂದ ಯಡಿಯೂರಪ್ಪ ಬೇಸರಗೊಂಡು ಸಂಸದ ಜಿ.ಎಸ್.ಬಸವರಾಜು ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರುವುದಕ್ಕೆ ಸಿದ್ಧರಾಗಿದ್ದರು. ಬಿಜೆಪಿಗೆ ಮತ್ತೆ ಸೇರಿ ದೊಡ್ಡ ತಪ್ಪನ್ನು ಯಡಿಯೂರಪ್ಪ ಮಾಡಿದ್ದು, ಉಮಾ ಭಾರತಿ ಮತ್ತು ಕಲ್ಯಾಣ್ ಸಿಂಗ್ ಅವರಿಗಾದ ಗತಿ ಯಡಿಯೂರಪ್ಪನವರಿಗೆ ಕೂಡ ಆಗುತ್ತೆ ಎಂದು ಲಕ್ಷ್ಮಿನಾರಾಯಣ್ ಹೇಳಿದರು.

ಮೋದಿ ಅಲೆ ಬರೀ ಅಲೆಯಾಗಿ ಉಳಿಯುತ್ತದೆ ಹೊರತು ಬಿಜೆಪಿ ಮತಗಳಾಗಿ ಪರಿವರ್ತನೆಯಾಗುವುದಿಲ್ಲ ಎಂದು ಅವರು ಲೇವಡಿ ಮಾಡಿದರು.ಕಾಂಗ್ರೆಸ್ 20 ಲೋಕಸಭೆ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಭವಿಷ್ಯ ನುಡಿದರು. ಆದಾಗ್ಯೂ ಚುನಾವಣೆ ರಾಜ್ಯ ಸರ್ಕಾರದ ಜನಮತಗಣನೆಯಲ್ಲ ಎಂದು ಹೇಳಿದರು. ಸಿದ್ದರಾಮಯ್ಯ ಲೋಕಸಭೆ ಚುನಾವಣೆ ಬಳಿಕವೂ ಹುದ್ದೆಯಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ನುಡಿದರು.

Share this Story:

Follow Webdunia kannada