Select Your Language

Notifications

webdunia
webdunia
webdunia
webdunia

ಕರ್ನಾಟಕದ ಮೂವರು ಮಹಿಳೆಯರು ಜೀಪ್ ಅಪಘಾತದಲ್ಲಿ ಸಾವು

ಕರ್ನಾಟಕದ ಮೂವರು ಮಹಿಳೆಯರು ಜೀಪ್ ಅಪಘಾತದಲ್ಲಿ ಸಾವು
, ಶುಕ್ರವಾರ, 21 ಫೆಬ್ರವರಿ 2014 (18:39 IST)
PR
PR
ಚೆನ್ನೈ: ತಮಿಳುನಾಡಿನ ಪಶುಪತಿ ದೇಗುಲದ ಬಳಿ ಸಂಭವಿಸಿದ ಅಪಘಾತದಲ್ಲಿ ಕರ್ನಾಟಕದ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಇನ್ನೂ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಹುಬ್ಬಳ್ಳಿಯಿಂದ ಸುಮಾರು 10 ಮಂದಿ ಯಾತ್ರಿಗಳು ಜೀಪ್‌ನಲ್ಲಿ ತೆರಳಿದ್ದರು.ಕುಂಭಕೋಣಂನ ಈಶ್ವರನ ದರ್ಶನಕ್ಕೆ ಇವರು ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

ತಮಿಳುನಾಡಿನ ತಂಜಾವೂರು ಬಳಿಯ ಪಶುಪತಿ ದೇಗುಲದ ಬಳಿ ರಾಜ್ಯ ಹೆದ್ದಾರಿಯಲ್ಲಿ ಎದುರಿಗೆ ಬರುತ್ತಿದ್ದ ಖಾಸಗಿ ಬಸ್ ಡಿಕ್ಕಿಹೊಡೆದು ಜೀಪ್ ನಜ್ಜುಗುಜ್ಜಾಗಿದ್ದು, ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ತಂಜಾವೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.

Share this Story:

Follow Webdunia kannada