Select Your Language

Notifications

webdunia
webdunia
webdunia
webdunia

ಒಂದು ರೂ.ಗೆ ಒಂದು ಕೆಜಿ ಬೆಲ್ಲ ವಿತರಣೆಗೆ ಚಿಂತನೆ

ಒಂದು ರೂ.ಗೆ ಒಂದು ಕೆಜಿ ಬೆಲ್ಲ ವಿತರಣೆಗೆ ಚಿಂತನೆ
, ಮಂಗಳವಾರ, 27 ಆಗಸ್ಟ್ 2013 (12:15 IST)
PR
PR
ಬೆಳಗಾವಿ: ಪಡಿತರ ಧಾನ್ಯದ ಜತೆ ಬೆಲ್ಲ ವಿತರಣೆಗೆ ಸರ್ಕಾರ ಚಿಂತನೆ ನಡೆಸಿರುವುದಾಗಿ ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ ಬೆಳಗಾವಿಯಲ್ಲಿ ತಿಳಿಸಿದ್ದಾರೆ. ಬಿಪಿಎಲ್ ಕಾರ್ಡುದಾರರಿಗೆ ಒಂದು ರೂ.ಗೆ ಒಂದು ಕೆಜಿ ಬೆಲ್ಲದಂತೆ ತಲಾ ಎರಡು ಕೆಜಿ ವಿತರಣೆಗೆ ಚಿಂತನೆ ನಡೆಸಿರುವುದಾಗಿಯೂ ಅವರು ಹೇಳಿದರು. ಕಬ್ಬು ಬೆಳೆಗಾರರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಬೆಲ್ಲ ವಿತರಣೆ ಮಾಡಲು ಚಿಂತನೆ ನಡೆಸಿರುವುದಾಗಿ ಹುಕ್ಕೇರಿ ತಿಳಿಸಿದರು. ಶೀಘ್ರವೇ ಬೆಲ್ಲ ವಿತರಣೆ ಯೋಜನೆ ಅನುಷ್ಠಾನಗೊಳಿಸುವುದಾಗಿ ಅವರು ತಿಳಿಸಿದರು.

ಈ ಕುರಿತು ಅಕ್ಟೋಬರ್ 2ರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು. ಬೆಳಗಾವಿಯಲ್ಲಿ ಗಣೇಶೋತ್ಸವ ಆಚರಣೆಗೆ ಒಂದು ಕೋಟಿ ಬಿಡುಗಡೆ ಮಾಡುವುದಾಗಿ ಪ್ರಕಾಶ್ ಹುಕ್ಕೇರಿ ತಿಳಿಸಿದರು. ಮುಂಬೈ ಮಾದರಿಯಲ್ಲಿ ಗಣೇಶ ಉತ್ಸವ ಆಚರಣೆ ನಡೆಸುವುದಾಗಿ ಅವರು ತಿಳಿಸಿದರು.

Share this Story:

Follow Webdunia kannada