Webdunia - Bharat's app for daily news and videos

Install App

ಎಸ್‌ಇಝಡ್: ಸ್ವಾಮೀಜಿಗಳ ಎದುರೇ ಜಟಾಪಟಿ

Webdunia
ಸೋಮವಾರ, 17 ನವೆಂಬರ್ 2008 (10:38 IST)
ಮಂಗಳೂರು ವಿಶೇಷ ಆರ್ಥಿಕ ವಲಯ(ಎಂಎಸ್ಇಝಡ್)ಕ್ಕೆ ಸಂಬಂಧಿಸಿ ವಾಸ್ತವಾಂಶ ತಿಳಿಯಲು ಆಗಮಿಸಿದ ಹಿರಿಯ ಸ್ವಾಮೀಜಿಗಳ ಎದುರೇ ಎಂಎಸ್ಇಝಡ್‌ನ ಪರ ಹಾಗೂ ವಿರೋಧಿ ಬಣಗಳ ನಡುವೆ ಜಟಾಪಟಿ ನಡೆದಿದೆ.

ಬಜೆಪೆಯ ಪೆರ್ಮುದೆ ಕುಡುಬಿ ಪದವಿನ ಸುಮಾರು 15.3 ಎಕರೆ ಭೂಮಿಗೆ ಸಂಬಂಧಿಸಿ ಕೆಲವು ಸಮಯದಿಂದ ವಿವಾದ ಉಂಟಾಗಿತ್ತು. ಈ ಕುರಿತು ಮಾಹಿತಿ ಪಡೆಯುವ ನಿಟ್ಟಿನಲ್ಲಿ ಪೇಜಾವರ ಶ್ರೀ ಸ್ವಾಮೀಜಿ ಸೇರಿಂದತೆ ಹಲವು ಮಠದ ಸ್ವಾಮೀಜಿಗಳು ಸ್ಥಳ ಪರಿಶೀಲನೆಗೆ ತೆರಳಿದ್ದರು.

ಸ್ಥಳೀಯರಿಂದ ಮಾಹಿತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಆಗಮಿಸಿದ ಎಂಎಸ್ಇಝಡ್ ಅಧಿಕಾರಿಗಳು ದಾಖಲೆಗಳನ್ನು ತೋರಿಸಿ ವಾದ ಮಂಡಿಸಿದರು. ಆದರೆ ಇದನ್ನು ನಿರಾಕರಿಸಿದ ಕುಡುಬಿ ಜನಾಂಗದವರು ನಾವು ಅನಕ್ಷರಸ್ಥರಾಗಿದ್ದು ಬಲತ್ಕಾರವಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ದೂರಿದರು. ಇದರಿಂದ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ಒಂದು ಹಂತದಲ್ಲಿ ವಾತಾವರಣ ಉದ್ವಿಗ್ನಗೊಂಡಾಗ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಗಳು, ನಾವು ಸತ್ಯಾಂಶ ಅರಿಯಲು ಬಂದಿದ್ದೇವೆ. ನಮ್ಮ ಎದುರೇ ಗೂಂಡಾಗಿರಿ ನಡೆಯುವುದು ಸಲ್ಲದು. ಸತ್ಯ ವಿಷಯ ತಿಳಿಯಬೇಕಿದೆ ಎಂದು ಹೇಳಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments