Select Your Language

Notifications

webdunia
webdunia
webdunia
webdunia

ಎಫ್‌ಐಆರ್ ದಾಖಲಾದ ಮಾತ್ರಕ್ಕೆ ಕಳಂಕಿತರಲ್ಲ: ಸಿಎಂ ಪ್ರತಿಪಾದನೆ

ಎಫ್‌ಐಆರ್ ದಾಖಲಾದ ಮಾತ್ರಕ್ಕೆ ಕಳಂಕಿತರಲ್ಲ: ಸಿಎಂ ಪ್ರತಿಪಾದನೆ
, ಶನಿವಾರ, 4 ಜನವರಿ 2014 (13:51 IST)
PR
PR
ಹಿರೇಕೆರೂರು: ಸಂತೋಷ್ ಲಾಡ್ ಕಳಂಕಿತರೆಂದು ಕೈಬಿಟ್ಟಿಲ್ಲ. ಆರೋಪ ಬಂದ ಮೇಲೆ ಸ್ವಇಚ್ಛೆಯಿಂದ ಅವರು ರಾಜೀನಾಮೆ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹಿರೇಕೆರೂರು ಪಟ್ಟಣದಲ್ಲಿ ಪ್ರತಿಪಾದಿಸಿದ್ದಾರೆ. ಸಂತೋಷ್ ಲಾಡ್ ಅವರನ್ನು ಕಳಂಕಿತರೆಂಬ ಆರೋಪದ ಮೇಲೆ ಕೈಬಿಟ್ಟು, ಅಷ್ಟೇ ಕಳಂಕಿತರಾದ ಡಿ.ಕೆ. ಶಿವಕುಮಾರ್ ಮತ್ತು ರೋಷನ್ ಬೇಗ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆಂದು ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಿಎಂ ಹೇಳಿಕೆ ಹೊರಬಿದ್ದಿದೆ. ನಮ್ಮ ಮಂತ್ರಿಮಂಡಲದಲ್ಲಿ ಯಾರೂ ಕಳಂಕಿತರಲ್ಲ.

ಡಿಕೆಶಿ ಮೇಲೆ ಡಿನೋಟಿಫಿಕೇಷನ್ ಸಂಬಂಧ ಎಫ್‌ಐಆರ್ ದಾಖಲಾಗಿತ್ತು. ಅದಕ್ಕೆ ಸಚಿವರಿಬ್ಬರು ತಡೆಯಾಜ್ಞೆ ತಂದಿದ್ದಾರೆ. ಎಫ್ಐಆರ್ ದಾಖಲಾದ ಮಾತ್ರಕ್ಕೆ ಕಳಂಕಿತರಲ್ಲ ಎಂದು ಹಿರೇಕೆರೂರು ಪಟ್ಟಣದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.

Share this Story:

Follow Webdunia kannada