ಎಸ್ಬಿಐ ಬ್ಯಾಂಕಿನ ನೌಕರರೇ ಖೋಟಾನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಆಘಾತಕಾರಿ ಸುದ್ದಿಯೊಂದು ಇದೀಗ ಹೊರ ಬಿದ್ದಿದೆ. ಇಬ್ಬರು ಎಸ್ಬಿಐ ನೌಕರರು ಪೆಟ್ರೋಲ್ ಬಂಕ್ ಬಳಿಗೆ ಹೋಗಿ ಅಲ್ಲಿ ಸಾವಿರ ರೂಪಾಯಿ ಮುಖಬೆಲೆಯ ನೋಟೊಂದನ್ನು ಚಲಾವಣೆ ಮಾಡಲು ಯತ್ನಿಸಿದ್ದಾರೆ. ಆದ್ರೆ ಬಂಕ್ ಸಿಬ್ಬಂದಿಗಳು ನೋಟನ್ನು ಪರಿಶೀಲನೆ ಮಾಡಿದಾಗ ಅದು ಖೋಟಾನೋಟು ಎಂದು ತಿಳಿದುಬಂದಿದೆ. ಅವರನ್ನು ಹಿಡಿದು ವಿಚಾರಣೆ ನಡೆಸಿದಾಗ ಅವರು ಬ್ಯಾಂಕ್ ನೌಕರರು ಎಂದು ತಿಳಿದುಬಂದಿದೆ.
ರಾಮನಗರ ಜಿಲ್ಲೆಯ ಮಾಗೇನಹಳ್ಳಿಯ ಎಸ್ಬಿಐ ಶಾಖೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಅಯಾಜ್ ಮತ್ತು ಎಸ್ಬಿಐ ಬ್ಯಾಂಕಿನ ಕಾರು ಚಾಲಕನಾಗಿರುವ ವೆಂಕಟೇಶ್ ಎಂಬ ಇಬ್ಬರು ಇಬ್ಬರು ವ್ಯಕ್ತಿಗಳು ರಾಮನಗರದ ಮಾಗೇನಹಳ್ಳಿಯ ಬಳಿ ಇರುವಂತಹ ಪೆಟ್ರೋಲ್ ಬಂಕ್ನಲ್ಲಿ ಸಾವಿರ ರೂಪಾಯಿಯ ಮುಖಬೆಲೆಯ ಖೋಟಾನೋಟನ್ನು ಚಲಾವಣೆ ಮಾಡಲು ಯತ್ನಿಸಿದಾಗ ಈ ವಿಷಯ ಹೊರ ಬಂದಿದೆ.
ಸದ್ಯಕ್ಕೀಗ ಅಯಾಜ್ ಮತ್ತು ವೆಂಕಟೇಶ್ ಎಂಬ ಇಬ್ಬರು ವ್ಯಕ್ತಿಗಳನ್ನು ಇದೀಗ ಪೋಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಬಂಧಿತರಿಂದ ಖೋಟಾನೋಟುಗಳನ್ನು ವಶಪಡಿಸಿಕೊಂಡಿರುವ ಪೋಲೀಸ್ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸುತ್ತಿದ್ದಾರೆ.