Select Your Language

Notifications

webdunia
webdunia
webdunia
webdunia

ಉಳ್ಳಾಲ ವಿಧಾನ ಸಭಾ ಚುನಾವಣೆಯತ್ತ ಎಲ್ಲರ ಕಣ್ಣು

ಉಳ್ಳಾಲ ವಿಧಾನ ಸಭಾ ಚುನಾವಣೆಯತ್ತ ಎಲ್ಲರ ಕಣ್ಣು

ಇಳಯರಾಜ

ರಾಜ್ಯ ರಾಜಕೀಯ ನಾಯಕರ ಚಿತ್ತ ಈಗ ಉಳ್ಳಾಲದತ್ತ ನೆಟ್ಟಿದೆ. ತಮ್ಮ ತಮ್ಮ ಪಕ್ಷದಿಂದ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಚಿಂತನೆಯನ್ನೂ ನಡೆಸುತ್ತಿದೆ.

ಈ ನಡುವೆ ಎಲ್ಲಾ ಪಕ್ಷಗಳಲ್ಲೂ ಕಣಕ್ಕಿಳಿಯುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿರುವುದು ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಬಿಜೆಪಿ ಚಂದ್ರಶೇಖರ ಉಚ್ಚಿಲ ಅವರನ್ನೇ ಈ ಬಾರಿಯೂ ಕಣಕ್ಕಿಳಿಸಿದೆ. ಇದರಿಂದಾಗಿ ಮಾಜಿ ಬಿಜೆಪಿ ಶಾಸಕ ಕೆ.ಜಯರಾಮ ಶೆಟ್ಟಿ ಅವರಿಗೆ ಅಸಮಾಧಾನವಾಗಿ ಮತ್ತೆ ಪಕ್ಷಾಂತರ ನಡೆಸುವ ಸಾಧ್ಯತೆಯಿದೆ ಎಂಬುದು ಒಂದು ವರ್ತಮಾನ.

ಇತ್ತೀಚೆಗಷ್ಟೇ ಜೆಡಿಎಸ್‌ನಿಂದ ಮತ್ತೆ ಬಿಜೆಪಿಗೆ ಕರೆಸಿಕೊಂಡು ಟಿಕೆಟ್ ಕೊಡುವುದಾಗಿ ನಂಬಿಸಲಾಗಿತ್ತು ಎಂಬ ಮಾತು ಕೇಳಿಬರುತ್ತಿದೆ. ಈ ನಡುವೆ ಸಮ್ಮಿಶ್ರ ಸರ್ಕಾರದ ಧರ್ಮದಂತೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತಿಲ್ಲ. ಒಂದು ವೇಳೆ ಕಣಕ್ಕಿಳಿಸಿದರೂ ಅದು ಬಿಜೆಪಿ ಅಭ್ಯರ್ಥಿಗೇ ತೊಡಕಾಗಲಿದೆ. ಅದು ಕಾಂಗ್ರೆಸ್‌ಗೆ ಅನುಕೂಲವಾಗಲಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೊದಲಿನಿಂದಲೂ ಇದ್ದು, ಒಂದು ಬಾರಿ ಬಿಜೆಪಿ, ಎರಡು ಬಾರಿ ಸಿಪಿಎಂ ಶಾಸಕರೂ ಇಲ್ಲಿಂದ ಆಯ್ಕೆಯಾಗಿದ್ದರು. ಮತ್ತೆ ಚಾಮುಂಡೇಶ್ವರೀ ಚುನಾವಣೆಯ ಕಾವು ಉಳ್ಳಾಲ ಚುನಾವಣೆಯಲ್ಲಿ ನಿರೀಕ್ಷಿಸಬಹುದು ಎಂಬುದು ರಾಜಕೀಯ ತಜ್ಞರ ಲೆಕ್ಕಾಚಾರ.

Share this Story:

Follow Webdunia kannada