Webdunia - Bharat's app for daily news and videos

Install App

ಉಡುಪಿ ಪರ್ಯಾಯಕ್ಕೆ 'ಕಟ್ಟಿಗೆ ಮುಹೂರ್ತ'

Webdunia
ಬುಧವಾರ, 15 ಜುಲೈ 2009 (16:25 IST)
ಮುಂದಿನ ಪರ್ಯಾಯ ಪೀಠದ ಸ್ವಾಮೀಜಿಗಳಾದ ಶಿರೂರು ಮಠದ ಲಕ್ಷ್ಮೀವರತೀರ್ಥರು ತೃತೀಯ ಕೃಷ್ಣಪೂಜಾ ಪರ್ಯಾಯದ ಪೂರ್ವಭಾವಿ ಕಾರ್ಯಕ್ರಮ 'ಕಟ್ಟಿಗೆ ಮುಹೂರ್ತ'ಕ್ಕೆ ಮಂಗಳವಾರ ಮಧ್ವತೀರ್ಥದ ಬಳಿ ಚಾಲನೆ ನೀಡಿದರು.

ಸಾಂಪ್ರದಾಯಿಕ ರೀತಿಯಲ್ಲಿ ಸಿಂಗರಿಸಿದ ಶಿರೂರು ಮಠದಿಂದ ಡೋಲು, ತಮಟೆ, ನಗಾರಿ, ಆನೆಯ ಮೆರವಣಿಗೆಯೊಂದಿಗೆ ಸುಮುಹೂರ್ತ ಪ್ರಾರಂಭಿಸಿದ ಸ್ವಾಮೀಜಿ ಚಂದ್ರಮೌಳೇಶ್ವರ, ಅನಂತೇಶ್ವರ, ಕೃಷ್ಣಮಠ ಮತ್ತು ಮುಖ್ಯಪ್ರಾಣದೇವರ ಗುಡಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಕನಕನ ಕಿಂಡಿಯಿಂದ ಕೃಷ್ಣನನ್ನು ನೋಡಿದರು, ಅಷ್ಟಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಅಲ್ಲಿಂದ ಕಟ್ಟಿಗೆ ಹೊತ್ತ ತಂಡದೊಂದಿಗೆ ರಥಬೀದಿಯನ್ನು ಸುತ್ತುಹಾಕಿ ಬಳಿಕ ಮಧ್ವಮಠದ ಬಳಿ ಬಂದು ಕಟ್ಟಿಗೆಯನ್ನು ಕಂಬಕ್ಕೆ ಆನಿಸಿ ಪುರೋಹಿತರಿಂದ ಅದನ್ನು ಪೂಜಿಸಿ ಕಟ್ಟಿಗೆ ಮುಹೂರ್ತಕ್ಕೆ ಅಧಿಕೃತ ಚಾಲನೆ ನೀಡಿದರು.

ಅಲ್ಲದೇ ಮಧ್ನಾಹ್ನ 12ರಿಂದ ರಾತ್ರಿ 12ರವರೆಗೆ ನಿರಂತರವಾಗಿ ಭಕ್ತರಿಗೆ ಅನ್ನಸಂತರ್ಪಣೆ ಮಾಡುವ ಮಹತ್ತರವಾದ ಉದ್ದೇಶ ಹೊಂದಿರುವುದಾಗಿ ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments