Select Your Language

Notifications

webdunia
webdunia
webdunia
webdunia

ಉಗ್ರಪ್ಪ ಹೇಳಿಕೆಗೆ ಜಗ್ಗೇಶ್ ತಿರುಗೇಟು

ಉಗ್ರಪ್ಪ ಹೇಳಿಕೆಗೆ ಜಗ್ಗೇಶ್ ತಿರುಗೇಟು
ಬೆಂಗಳೂರು , ಗುರುವಾರ, 20 ನವೆಂಬರ್ 2008 (12:01 IST)
ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಿದ ವಿ.ಎಸ್ ಉಗ್ರಪ್ಪ 'ಬಲ್ ನನ್ಮಗ' ಎಂದು ಮಾಜಿ ಶಾಸಕ ಕೆಎಸ್ಆರ್‌‌ಟಿಸಿ ಉಪಾಧ್ಯಕ್ಷ ಜಗ್ಗೇಶ್ ತಿರುಗೇಟು ನೀಡಿದ್ದಾರೆ.

ದೇವೇಗೌಡರ ಅಂಗಳದಲ್ಲಿ ಬೆಳೆದು ರಾಜಕೀಯ ಕಲಿತ ಉಗ್ರಪ್ಪ ನಂತರ ಅವರಿಗೆ ಕೈಕೊಟ್ಟು ಕಾಂಗ್ರೆಸ್ ಸೇರಿದರು. ಇದೀಗ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ಸನ್ನು ಸರ್ವನಾಶ ಮಾಡಿದ್ದಾರೆ. ತಮ್ಮ ಹಿಟ್ ಸಿನಿಮಾ ಹಾಗೂ ಚಿತ್ರರಂಗದಲ್ಲಿ ಸ್ಥಾನಮಾನ ಕಲ್ಪಿಸಿದ 'ತರ್ಲೆ ನನ್ಮಗ' ಚಿತ್ರದ ಶೀರ್ಷಿಕೆ ಹಿಡಿದು ಹೀಯಾಳಿಸಿದ್ದಾರೆ. ಅದೇ ರೀತಿಯ ಮತ್ತೊಂದು ಸಿನಿಮಾವಾದ ಬಲ್ ನನ್ಮಗ ಚಿತ್ರದ ಟೈಟಲ್ ಅನ್ನು ಉಗ್ರಪ್ಪ ಅವರಿಗೆ ದಾನ ಮಾಡುತ್ತೇನೆ. ಉಪಚುನಾವಣೆಯಲ್ಲಿ ಫಲಿತಾಂಶದ ನಂತರ ಸೂಪರ್ ನನ್ಮಗನಾಗಿ ಉಳಿಯುತ್ತೇನೆ ಎಂದು ಹೇಳಿದರು.

ತುರುವೇಕೆರೆಯಲ್ಲಿ ನಡೆದ ಸಮಾವೇಶಕ್ಕೆ ಉಗ್ರಪ್ಪ 50 ಲಕ್ಷ ರೂ. ಖರ್ಚು ಮಾಡಿದ್ದರೂ 3 ಸಾವಿರ ಜನರನ್ನು ಸೇರಿಸಲಾಗಲಿಲ್ಲ. ಇದು ಕಾಂಗ್ರೆಸ್ ನೆಲಕಚ್ಚಿದ್ದಕ್ಕೆ ಸಾಕ್ಷಿ ಎಂದರು.

ಕಾಂಗ್ರೆಸ್‌‌ನಲ್ಲಿ ಟಿಕೆಟ್ ಮಾರಾಟವಾದ ಬಗ್ಗೆ ಮೊದಲ ಬಾಂಬ್ ಸಿಡಿಸಿದವನೇ ನಾನು. ತುರುವೇಕೆರೆಯ ಕಾಂಗ್ರೆಸ್ ಮುಖಂಡರು ಅಮಾಯಕರ ಮನೆ ಮಾರಿಸಿದರು. ಈ ಹಣ ಪಡೆದು ಟಿಕೆಟ್ ನೀಡಿದರು. ತಮಗೆ ದುಡ್ಡು ಕೊಟ್ಟು ಟಿಕೆಟ್ ಪಡೆಯುವ ಅಗತ್ಯವಿಲ್ಲದ್ದರಿಂದ ತಾವು ಹಣ ನೀಡಲಿಲ್ಲ ಎಂದರು.

Share this Story:

Follow Webdunia kannada