Select Your Language

Notifications

webdunia
webdunia
webdunia
webdunia

ಉಗ್ರಪ್ಪ ಮಾನಸಿಕ ಅಸ್ವಸ್ಥ. ಸೂಕ್ತ ಚಿಕಿತ್ಸೆ ಕೊಡಿಸಿ : ಆಯನೂರು ಮಂಜುನಾಥ್‌ ತಿರುಗೆಟು.

ಉಗ್ರಪ್ಪ ಮಾನಸಿಕ ಅಸ್ವಸ್ಥ. ಸೂಕ್ತ ಚಿಕಿತ್ಸೆ ಕೊಡಿಸಿ : ಆಯನೂರು ಮಂಜುನಾಥ್‌ ತಿರುಗೆಟು.
ಶಿವಮೊಗ್ಗ , ಮಂಗಳವಾರ, 12 ನವೆಂಬರ್ 2013 (13:06 IST)
PR
PR
ಕಾಂಗ್ರೆಸ್‌ ಮುಖಂಡ ವಿಎಸ್‌ ಉಗ್ರಪ್ಪಗೆ ಮಾನಸಿಕ ಸ್ಥಿತಿ ಹದಗೆಟ್ಟಿದೆ. ದಯವಿಟ್ಟು ಡಾ.ಜಿ. ಪರಮೇಶ್ವರ್‌ ಅವರು ಉಗ್ರಪ್ಪನವರನ್ನು ಮಾನಸಿಕ ರೋಗಿಗಳ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು. ಇಲ್ಲದಿದ್ದರೆ ಶಿವಮೊಗ್ಗಗೆ ಕಳಿಸಿಕೊಡಿ. ನಮ್ಮಲ್ಲಿನ ಮೂವರು ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸ್ತೀವಿ. ಚಿಕಿತ್ಸೆಗೆ ಹಣ ನೀಡಬೇಕಾಗಿಲ್ಲ. ಜನರೇ ಹಣ ನೀಡ್ತಾರೆ ಎಂದು ಬಿಜೆಪಿ ಮುಖಂಡ ಆಯನೂರು ಮಂಜುನಾಥ್‌ ತಿರುಗೇಟು.

ಮೋದಿ ರ‍್ಯಾಲಿಯಲ್ಲಿ ಬಿಜೆಪಿ ಪಕ್ಷದವರು ಕಪ್ಪು ಹಣವನ್ನು ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ವಿಎಸ್‌ ಉಗ್ರಪ್ಪ ಕಿಡಿ ಕಾರಿದ್ರು. ಉಗ್ರಪ್ಪನವರ ಹೇಳಿಕೆಗೆ ತಿರುಗೇಟು ನೀಡಿದ ಆಯನೂರು ಮಂಜುನಾಥ್‌ "ಮೋದಿ ಜನ ಮೆಚ್ಚಿದ ನಾಯಕ. ಮೋದಿಯವರ ಮ್ಯಾಜಿಕ್ ನೋಡಿ ಜನರು ಆಗಮಿಸುತ್ತಿದ್ದಾರೆ. ಮೋದಿಯವರಿಗೆ ಸಿಗುತ್ತಿರುವ ಪ್ರಚಾರ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ. ಹೀಗಾಗಿ ವಿಎಸ್‌ ಉಗ್ರಪ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ. ದಯವಿಟ್ಟು ಪರಮೇಶ್ವರ್‌ ಅವರು ಉಗ್ರಪ್ಪನವರಿಗೆ ಸೂಕ್ತ ಚಿಕಿತ್ಸೆ ಕೊಡಬೇಕು ಎಂದು ತಿರುಗೇಟು ನೀಡಿದ್ರು.

Share this Story:

Follow Webdunia kannada