Select Your Language

Notifications

webdunia
webdunia
webdunia
webdunia

ಇಂದು ಮಂಡ್ಯಕ್ಕೆ ಸೋನಿಯಾ ಆಗಮನ.

ಇಂದು ಮಂಡ್ಯಕ್ಕೆ ಸೋನಿಯಾ ಆಗಮನ.
ಮಂಡ್ಯ , ಸೋಮವಾರ, 30 ಸೆಪ್ಟಂಬರ್ 2013 (09:58 IST)
PR
PR
ಇಂದು ಮಂಡ್ಯಾಗೆ ಆಗಮಿತ್ತಿರುವ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸ್ವಾಗತಕ್ಕೆ ಮಂಡ್ಯ ನಗರ ಸಜ್ಜಾಗಿದೆ. ಸೋನಿಯಾಗಾಗಿ ಇಲ್ಲಿನ ಸರ್‌ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ವೇದಿಕೆ ನಿರ್ಮಾಣಗೊಂಡಿದ್ದು, ನಗರದೆಲ್ಲೆಡೆ ಕಾಂಗ್ರೆಸ್‌‌ ಬ್ಯಾನರ್‌ಗಳು ರಾರಾಜಿಸುತ್ತಿವೆ.

ಇಂದು ಮಧ್ಯಾಹ್ನ 3 ಗಂಟೆಗೆ ಬಹಿರಂಗ ಸಭೆಯನ್ನು ಉದ್ದೇಶಿಸಿ ಸೋನಿಯಾ ಗಾಂಧಿ ಮಾತನಾಡಲಿದ್ದಾರೆ. ಕಾರ್ಯಕ್ರಮಕ್ಕೆ 2 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್‌ ತಿಳಿಸಿದ್ದಾರೆ. ರಾಜ್ಯದ ಉಸ್ತುವಾರಿ ಹೊಣೆಹೊತ್ತಿರುವ ದಿಗ್ವಿಜಯ್‌ ಸಿಂಗ್‌, ಮುಖ್ಯ­ಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ, ಜಿಲ್ಲಾ ಉಸ್­ತುವಾರಿ ಸಚಿವ ಅಂಬರೀಷ್‌, ಸಂಸದರಾದ ರಮ್ಯಾ, ಡಿ.ಕೆ. ಸುರೇಶ್‌ ಇಂದಿನ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ರಾಜ್ಯ ಸಚಿವ ಸಂಪುಟದ ಸಚಿವರು, ಶಾಸಕರುಗಳೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸೋನಿಯಾ ಗಾಂಧಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಭದ್ರತೆಯನ್ನು ನೀಡಲಾಗಿದೆ. 6 ಮಂದಿ ಹೆಚ್ಚುವರಿ ಎಸ್ಪಿ, 12 ಮಂದಿ ಡಿವೈಎಸ್ಪಿ ಸೇರಿದಂತೆ 1,500 ಪೋಲೀಸರನ್ನು ಸ್ಥಳದಲ್ಲಿ ನಿಜಯೋಜಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಭೂಷಣ ಬೊರಸೆ ತಿಳಿಸಿದರು.

Share this Story:

Follow Webdunia kannada