Select Your Language

Notifications

webdunia
webdunia
webdunia
webdunia

ಆಲೂಗಡ್ಡೆ, ತೆಂಗಿನಕಾಯಿ ಮಾರಿ ಸಾವಿರಾರು ಕೋಟಿ ಆಸ್ತಿ ಸಂಪಾದಿಸಿದ್ದಾರಾ?: ಸಿಎಂ ಪ್ರಶ್ನೆ

ಆಲೂಗಡ್ಡೆ, ತೆಂಗಿನಕಾಯಿ ಮಾರಿ ಸಾವಿರಾರು ಕೋಟಿ ಆಸ್ತಿ ಸಂಪಾದಿಸಿದ್ದಾರಾ?: ಸಿಎಂ ಪ್ರಶ್ನೆ
ಹಾಸನ , ಶನಿವಾರ, 29 ಮಾರ್ಚ್ 2014 (16:41 IST)
PR
PR
ದೇವೇಗೌಡರ ಕುಟುಂಬ ಸಾವಿರಾರು ಕೋಟಿ ಆಸ್ತಿ ಗಳಿಕೆ ಮಾಡಿದ್ದಾರೆ. ಆಲೂಗಡ್ಡೆ, ತೆಂಗಿನ ಕಾಯಿ ಮಾರಿ ಇಷ್ಟೊಂದು ಆಸ್ತಿಯನ್ನು ಸಂಪಾದಿಸಿದ್ದಾರಾ? ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಎಲ್ಲಿಂದ ಬಂತು? ಡಿಕೆ ಶಿವಕುಮಾರ್ ವಿರುದ್ಧ ನಿರಂತರ ಆರೋಪ ಮಾಡ್ತಿದ್ದಾರೆ. ಡಿಕೆಶಿ ಪ್ರಕರಣ ಸಿಬಿಐ ತನಿಖೆಗೆ ವಹಿಸುವುದಾದರೆ ದೇವೇಗೌಡರ ಕುಟುಂಬದ ಆಸ್ತಿ ಬಗ್ಗೆಯೂ ತನಿಖೆಯಾಗಲಿ ಎಂದು ಹಾಸನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಗೌಡರು, ಅವರ ಮಕ್ಕಳು ಸುಳ್ಳುಹೇಳುವುದರಲ್ಲಿ ಮೊದಲಿಗರು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಣ್ಣೀರು ಸುರಿಸುವ ಮೂಲಕ ಸಹಾನುಭೂತಿ ಗಳಿಸಲು ಯತ್ನಿಸುತ್ತಾರೆ ಎಂದೂ ಟೀಕಿಸಿದರು.

ಈ ಚುನಾವಣೆಯಲ್ಲಿ ದೇವೇಗೌಡರು ಸೋಲುತ್ತಾರೆ ಎಂದು ಸಿಎಂ ಹೇಳಿದರು.ನನಗೆ ಭರವಸೆ ಬಂದಿದೆ. ಹಾಸನ ಲೋಕಸಭೆ ಕ್ಷೇತ್ರದಲ್ಲಿ ಎ.ಮಂಜು ನೂರಕ್ಕೆ ನೂರರಷ್ಟು ಇತಿಹಾಸ ನಿರ್ಮಾಣ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

Share this Story:

Follow Webdunia kannada