Select Your Language

Notifications

webdunia
webdunia
webdunia
webdunia

ಆದಾಯ ಮೀರಿ ಆಸ್ತಿ: ಯಡ್ಡಿ ಮಕ್ಕಳು ಮತ್ತು ಅಳಿಯಂದಿರು ಸಂಕಟದಲ್ಲಿ

ಆದಾಯ ಮೀರಿ ಆಸ್ತಿ: ಯಡ್ಡಿ ಮಕ್ಕಳು ಮತ್ತು ಅಳಿಯಂದಿರು ಸಂಕಟದಲ್ಲಿ
, ಸೋಮವಾರ, 25 ನವೆಂಬರ್ 2013 (18:04 IST)
PR
PR
ಬೆಂಗಳೂರು: ಯಡಿಯೂರಪ್ಪ ಮಕ್ಕಳು ಮತ್ತು ಅಳಿಯಂದಿರ ವಿರುದ್ದ ಸಿಬಿಐ ವಿಶೇಷ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಕೆಯಾಗಿದೆ. ಶಿವಮೊಗ್ಗದ ವಕೀಲ ವಿನೋದ್‌ರಿಂದ ದೂರು ಸಲ್ಲಿಕೆಯಾಗಿದೆ. ಇವರು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಯಡಿಯೂರಪ್ಪ ಅವರ ಮಕ್ಕಳಾದ ರಾಘವೇಂದ್ರ, ವಿಜಯೇಂದ್ರ, ಅಳಿಯಂದಿರಾದ ಸೋಹನ್ ಕುಮಾರ್ ಮತ್ತು ಉದಯ್ ವಿರುದ್ದ ಆರೋಪವನ್ನು ಮಾಡಲಾಗಿದೆ. ಇವರು ಆದಾಯ ಮೀರಿ ಸಾವಿರಾರು ಕೋಟಿ ರೂ.ಮೌಲ್ಯದ ಅಕ್ರಮ ಆಸ್ತಿಯನ್ನು ಗಳಿಸಿದ್ದಾರೆ.

50ಕ್ಕೂ ಹೆಚ್ಚು ಆಸ್ತಿಗಳನ್ನು ಶಿವಮೊಗ್ಗ, ಬೆಂಗಳೂರು ಮುಂತಾದ ಕಡೆಗಳಲ್ಲಿ ಖರೀದಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಸಿಬಿಐ ಕೋರ್ಟ್ ಈ ಕುರಿತು ದೂರು ದಾಖಲಿಸಿದ್ದು, ಸಿಬಿಐ ನ್ಯಾಯಾಧೀಶ ಶ್ರೀಶಾನಂದ ಅರ್ಜಿ ಸ್ವೀಕರಿಸಿದ್ದಾರೆ.

Share this Story:

Follow Webdunia kannada