Select Your Language

Notifications

webdunia
webdunia
webdunia
webdunia

ಆತ್ಮಾನಂದ ರಾಜೀನಾಮೆಗೆ ಬಿಗಿಪಟ್ಟು ಹಿಡಿದ ಅಂಬಿ ಬೆಂಬಲಿಗರು

ಆತ್ಮಾನಂದ ರಾಜೀನಾಮೆಗೆ ಬಿಗಿಪಟ್ಟು ಹಿಡಿದ ಅಂಬಿ ಬೆಂಬಲಿಗರು
, ಶನಿವಾರ, 31 ಆಗಸ್ಟ್ 2013 (15:42 IST)
PR
PR
ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಸಚಿವ ಅಂಬರೀಶ್ ಮತ್ತು ಆತ್ಮಾನಂದ ನಡುವೆ ಮುಸುಕಿನ ಗುದ್ದಾಟ ಷುರುವಾಗಿದೆ. ಕೆಪಿಸಿಸಿ ಕಚೇರಿಗೆ ಆಗಮಿಸಿದ ಅಂಬರೀಷ್ ಬೆಂಬಲಿಗರು ಕಚೇರಿ ಮುಂದೆ ಪ್ರತಿಭಟಿಸಿ ಆತ್ಮಾನಂದ ರಾಜೀನಾಮೆಗೆ ಬಿಗಿಪಟ್ಟು ಹಿಡಿದರು. ಮಂಡ್ಯ ಜಿಲ್ಲಾಧ್ಯಕ್ಷರಾಗಿರುವ ಆತ್ಮಾನಂದ ಅವರನ್ನು ಅವರ ಸ್ಥಾನದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯನ್ನು ನಡೆಸಿದ ಆತ್ಮಾನಂದ ಅವರು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆ ಅಂಗೀಕರಿಸುವಂತೆ ಕೆಪಿಸಿಸಿ ಅಧ್ಯಕ್ಷರನ್ನು ಅಂಬರೀಷ್ ಒತ್ತಾಯಿಸಿದ್ದರು.

ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ದ ಅಂಬರೀಷ್ ತಕ್ಷಣವೇ ಆತ್ಮಾನಂದ ಅವರ ರಾಜೀನಾಮೆ ಅಂಗೀಕರಿಸಬೇಕೆಂದು ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಈಗ ಅಂಬರೀಷ್ ಮತ್ತು ಆತ್ಮಾನಂದ ನಡುವೆ ಮುಸುಕಿನ ಗುದ್ದಾಟ ಮತ್ತೆ ಭುಗಿಲೆದ್ದಿದೆ.

Share this Story:

Follow Webdunia kannada