Select Your Language

Notifications

webdunia
webdunia
webdunia
webdunia

ಅಯ್ಯೋ ದೇವ್ರೆ, ನಿದ್ರೆಗೆ ಶರಣಾದ ಸಿಎಂಗೆ ಖಮರುಲ್ ಇಸ್ಲಾಂ ಸಾಥ್

ಅಯ್ಯೋ ದೇವ್ರೆ, ನಿದ್ರೆಗೆ ಶರಣಾದ ಸಿಎಂಗೆ ಖಮರುಲ್ ಇಸ್ಲಾಂ ಸಾಥ್
, ಶನಿವಾರ, 21 ಡಿಸೆಂಬರ್ 2013 (19:05 IST)
PR
PR
ಬೆಂಗಳೂರು: ಬೆಂಗಳೂರಿನ ಹೊರವಲಯದ ಬಾಗಲೂರು ಬಳಿ ಕೇಂದ್ರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ರು. ಖಮರುಲ್ ಇಸ್ಲಾಂ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಪಸಂಖ್ಯಾತರ ಮುಖ್ಯಸ್ಥರು, ರಹಮಾನ್ ಖಾನ್ ಭಾಗವಹಿಸಿದ್ದರು. ಆದರೆ ಒಂದು ವಿಷಯವೇನೆಂದರೆ ಕಾರ್ಯಕ್ರಮದ ಆಗುಹೋಗುಗಳ ಬಗ್ಗೆ , ಕಾರ್ಯಕ್ರಮದಲ್ಲಿ ಏನು ಮಾತಾಡಿದ್ರು ಎನ್ನುವುದು ಸಿಎಂ ಮತ್ತು ಕಮರುಲ್ ಇಸ್ಲಾಂ ಅವರಿಗೆ ಗೊತ್ತಾಗಲೇ ಇಲ್ಲ.

ಏಕೆಂದರೆ ಸಿಎಂ ಸಿದ್ದರಾಮಯ್ಯ ಗಡದ್ ನಿದ್ರೆಗೆ ಶರಣಾಗಿದ್ದರು. ಅವರ ಕನ್ನಡಕ ಕೆಳಗಡೆ ಬಿದ್ದಿದ್ದನ್ನು ಪಕ್ಕದಲ್ಲಿದ್ದವರು ಎತ್ತಿಕೊಟ್ಟರು. ಆದರೆ ಅವರಿಗೆ ಸಾಥ್ ನೀಡುವಂತೆ ಖಮರುಲ್ ಇಸ್ಲಾಂ ಕೂಡ ನಿದ್ರೆಗೆ ಶರಣಾಗಿದ್ದರು. ರಹಮಾನ್ ಖಾನ್ ಭಾಷಣ ಮಾಡುವಾಗ ಅವರು ಹೇಳಿದ ಮಾತುಗಳು ಯಾವುದೂ ಸಿಎಂ ಗಮನಕ್ಕೆ ಬರಲೇ ಇಲ್ಲ.

Share this Story:

Follow Webdunia kannada