Select Your Language

Notifications

webdunia
webdunia
webdunia
webdunia

ಅನ್ನಭಾಗ್ಯಕ್ಕೆ ಕನ್ನ: ಗೋದಾಮಿನಲ್ಲಿ ಸಿಕ್ಕಿದ್ದು ಅಕ್ಕಿ ನುಚ್ಚು, ಜೋಳ, ಸಜ್ಜೆ

ಅನ್ನಭಾಗ್ಯಕ್ಕೆ ಕನ್ನ: ಗೋದಾಮಿನಲ್ಲಿ ಸಿಕ್ಕಿದ್ದು ಅಕ್ಕಿ ನುಚ್ಚು, ಜೋಳ, ಸಜ್ಜೆ
, ಗುರುವಾರ, 20 ಫೆಬ್ರವರಿ 2014 (14:16 IST)
PR
PR
ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಕನ್ನ ಹಾಕುತ್ತಿರುವ ಬಗ್ಗೆ ಎಚ್ಚೆತ್ತುಕೊಂಡಿರುವ ಆಹಾರ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಅಕ್ಕಿ ಸಂಗ್ರಹಿಸಲಾಗಿದ್ದ ಹುಬ್ಬಳ್ಳಿಯ ಲಕ್ಷ್ಮಿ ಸೇಲ್ಸ್ ಕಾರ್ಪೋರೇಷನ್ ಗೋದಾಮಿಗೆ ಮೇಲೆ ದಾಳಿ ಮಾಡಿದಾಗ, ಅಕ್ಕಿನುಚ್ಚು, ಜೋಳ ಮತ್ತು ಸಜ್ಜೆ ಪತ್ತೆಯಾಗಿದೆ. ಆದರೆ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ರಾತ್ರೋರಾತ್ರಿ ಬೇರೆಡೆಗೆ ಸ್ಥಳಾಂತರಿಸಬಹುದೆಂದು ಶಂಕಿಸಲಾಗಿದೆ.

'ಟಿವಿ ವಾಹಿನಿಯೊಂದರಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದಾರೆಂಬ ಸುದ್ದಿಪ್ರಕಟವಾದ ಬಳಿಕ ಆಹಾರ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದರು. ಆದರೆ ಅಕ್ಕಿನುಚ್ಚು, ಜೋಳ ಮತ್ತು ಸಜ್ಜೆ ಮಾತ್ರ ಗೋದಾಮಿನಲ್ಲಿ ಪತ್ತೆಯಾಗಿದ್ದರಿಂದ ಅವರಿಗೆ ನಿರಾಶೆಯಾಗಿದೆ.

Share this Story:

Follow Webdunia kannada