Select Your Language

Notifications

webdunia
webdunia
webdunia
webdunia

ಅಡಿಕೆ ನಿಷೇಧ ವಿರೋಧಿಸಿ ಬಿಜೆಪಿ ಸಂಸದರ ಪ್ರತಿಭಟನೆ

ಅಡಿಕೆ ನಿಷೇಧ ವಿರೋಧಿಸಿ ಬಿಜೆಪಿ ಸಂಸದರ ಪ್ರತಿಭಟನೆ
, ಮಂಗಳವಾರ, 17 ಡಿಸೆಂಬರ್ 2013 (11:19 IST)
PR
PR
ನವದೆಹಲಿ: ಅಡಿಕೆ ನಿಷೇಧಿಸದಂತೆ ಒತ್ತಾಯಿಸಿ ದೆಹಲಿಯಲ್ಲಿ ಬಿಜೆಪಿ ಸಂಸದರು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯ ಗಾಂಧಿ ಪ್ರತಿಮೆ ಬಳಿ ಈ ಪ್ರತಿಭಟನೆ ನಡೆದಿದೆ. ಅಡಿಕೆ ನಿಷೇಧದ ಕುರಿತು ಕೇಂದ್ರದ ಪ್ರಸ್ತಾಪಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಅನಂತಕುಮಾರ್, ನಳಿನ್ ಕಟೀಲ್, ಸಿದ್ದೇಶ್, ಶಿವಕುಮಾರ್ ಉದಾಸಿ , ಪ್ರಹ್ಲಾದ್ ಜೋಷಿ ಮುಂತಾದವರು ಭಾಗಿಯಾಗಿದ್ದಾರೆ. ಅಡಿಕೆ ನಿಷೇಧಿಸುವ ಮೂಲಕ ಅಡಿಕೆ ಬೆಳೆಗಾರರಿಗೆ ತೊಂದರೆಯಾಗಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ಶೂನ್ಯ ವೇಳೆಯಲ್ಲಿ ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾಪಿಸಲು ಕರ್ನಾಟಕದ ಸಂಸದರು ಅನುಮತಿಯನ್ನು ಕೋರಲಿದ್ದಾರೆಂದು ತಿಳಿದುಬಂದಿದೆ. ಈ ಮೂಲಕ ಅಡಿಕೆ ನಿಷೇಧಿಸದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಕ್ರಮಕ್ಕೆ ಸಂಸದರು ಮುಂದಾಗಿದ್ದಾರೆ.

Share this Story:

Follow Webdunia kannada