Select Your Language

Notifications

webdunia
webdunia
webdunia
webdunia

ಅಂಬರೀಷ್ ದಿಢೀರ್ ಮಂಡ್ಯಕ್ಕೆ ಆಗಮನ: ಕಾರ್ಯಕರ್ತರಲ್ಲಿ ಸಂಚಲನ

ಅಂಬರೀಷ್ ದಿಢೀರ್ ಮಂಡ್ಯಕ್ಕೆ ಆಗಮನ: ಕಾರ್ಯಕರ್ತರಲ್ಲಿ ಸಂಚಲನ
, ಮಂಗಳವಾರ, 1 ಏಪ್ರಿಲ್ 2014 (16:49 IST)
PR
PR
ಮಂಡ್ಯ: ಬೆಳ್ಳಂಬೆಳಿಗ್ಗೆ ರೆಬೆಲ್ ಸ್ಟಾರ್ ಅಂಬರೀಷ್ ಮಂಡ್ಯಕ್ಕೆ ಆಗಮಿಸಿದ್ದು, ಅಂಬರೀಷ್ ದಿಢೀರ್ ಆಗಮನದಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಒಂದು ರೀತಿಯ ಸಂಚಲನ ಉಂಟಾಗಿದೆ. ಅಂಬರೀಷ್ ಒಂದು ವಾರದ ನಂತರ ಬೆಂಗಳೂರಿಗೆ ಆಗಮಿಸುತ್ತಾರೆ ಎಂಬ ಮಾಹಿತಿ ಇತ್ತು. ಆದರೆ ಅಂಬರೀಷ್ ದಿಢೀರನೇ ಮಂಡ್ಯಕ್ಕೆ ಆಗಮಿಸಿ ಬೆಂಬಲಿಗರ ಜತೆ ರಹಸ್ಯ ಸ್ಥಳದಲ್ಲಿ ಕಾರ್ಯತಂತ್ರ ನಡೆಸಿದ್ದಾರೆ.

ಅಂಬರೀಷ್ ಸಿಂಗಾಪುರದಿಂದ ಆಗಮಿಸುವ ಮುಂಚೆ ಯಾರಿಗೂ ಮಾಹಿತಿ ನೀಡಿರಲಿಲ್ಲ ಎಂದು ಹೇಳಲಾಗುತ್ತಿದೆ. ಅಂಬರೀಷ್ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ನಾನು ಸಿಂಗಾಪುರದಲ್ಲಿದ್ದಾಗ ಮಾನಸಿಕ ತಳಮಳವಿತ್ತು. ಯಾವಾಗ ಊರಿಗೆ ಹೋಗುತ್ತೇನೆಂಬ ಕಾತುರವಿತ್ತು. ಆದ್ದರಿಂದ ದಿಢೀರ್ ಆಗಮಿಸಿದ್ದಾಗಿ ತಿಳಿಸಿದ್ದಾರೆ.
ಮುಂದಿನ ಪುಟ ನೋಡಿ

webdunia
PR
PR
ಅಂಬರೀಷ್ ನಿಜವಾಗಲೂ ಮಂಡ್ಯಕ್ಕೆ ಆಗಮಿಸಿಲ್ಲ. ಈ ಕುರಿತು ಟಿವಿ ವಾಹಿನಿಯೊಂದು ಬೆಳಿಗ್ಗೆಯಿಂದಲೇ ಸುದ್ದಿ ಬಿತ್ತರಿಸುತ್ತಿತ್ತು. ಆದರೆ ಅಂಬರೀಷ್ ಧ್ವನಿಯನ್ನು ಅನುಕರಿಸಿ ಮಾತನಾಡಿದ್ದು ಉಡೀಸ್ ಖ್ಯಾತಿಯ ಮಹೇಶ್. ಇವತ್ತು ಏಪ್ರಿಲ್ ಒಂದು ಮೂರ್ಖರ ದಿನವಾಗಿದ್ದರಿಂದ ಫೂಲ್ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಬಿತ್ತರಿಸಲಾಗಿದೆ. ಶಿವರಾಮೇಗೌಡರು ಧ್ವನಿಯನ್ನು ಗುರುತಿಸಿ ಅಂಬರೀಷ್ ಅಲ್ಲ, ಬೇರೆಯವರ ಧ್ವನಿ ಎಂದು ಹೇಳಿದಾಗಲೇ ಅಂಬರೀಷ್ ಧ್ವನಿಯಲ್ಲ ಎಂಬ ವಿಷಯ ತಿಳಿದುಬಂದಿದೆ.

ಅಂಬರೀಷ್ ಇನ್ನೂ ಸಿಂಗಾಪುರದಲ್ಲೇ ವಿಶ್ರಾಂತಿ ಪಡೆಯುತ್ತಿದ್ದು, ಇನ್ನೂ ಸ್ವದೇಶಕ್ಕೆ ಆಗಮಿಸಿಲ್ಲ ಎಂದು ತಿಳಿದುಬಂದಿದೆ.

Share this Story:

Follow Webdunia kannada