Select Your Language

Notifications

webdunia
webdunia
webdunia
webdunia

'ಅಂಬರೀಷ್ ಆರೋಗ್ಯ ಸ್ಥಿರವಾಗಿದೆ, ಆತಂಕ ಪಡುವ ಅಗತ್ಯವಿಲ್ಲ'

'ಅಂಬರೀಷ್ ಆರೋಗ್ಯ ಸ್ಥಿರವಾಗಿದೆ, ಆತಂಕ ಪಡುವ ಅಗತ್ಯವಿಲ್ಲ'
, ಸೋಮವಾರ, 24 ಫೆಬ್ರವರಿ 2014 (17:06 IST)
PR
PR
ಅಂಬರೀಷ್ ದೇಹದಿಂದ 11 ಲೀಟರ್ ನೀರು ಹೊರತೆಗೆಯಲಾಗಿದೆ. ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿತ್ತು. ಇನ್ನೂ 8-10 ಲೀಟರ್ ನೀರನ್ನು ಹೊರತೆಗೆಯಬೇಕಾಗಿದ್ದು, ಇನ್ನೂ ಎರಡು ದಿನಗಳ ಕಾಲ ವೆಂಟಿಲೇಟರ್‌ನಲ್ಲಿ ಇರಬೇಕಾಗುತ್ತದೆ. ಅಂಬಿ ಶೀಘ್ರದಲ್ಲೇ ಗುಣಮುಖರಾಗುತ್ತಾರೆ ಎಂದು ಮಂಡ್ಯದ ಇಂಡುವಾಳ ಗ್ರಾಮದಲ್ಲಿ ಸಂಸದೆ ರಮ್ಯಾ ಹೇಳಿಕೆ ನೀಡಿದ್ದಾರೆ. ಸಾಕಷ್ಟು ದಿನಗಳಿಂದ ಅಂಬರೀಷ್ ಅವರಿಗೆ ಶ್ವಾಸಕೋಶದ ತೊಂದರೆಯಿದ್ದರೂ ಮನೆಯಲ್ಲೇ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು.

ಅಂಬರೀಷ್ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು, ಔಷಧಗಳ ಪ್ರಭಾವದಿಂದ ಅವರಿಗೆ ಮಾತನಾಡಲು ಆಗುತ್ತಿಲ್ಲ. ಅವರ ಶ್ವಾಸಕೋಶ ಮತ್ತು ಮೂತ್ರಪಿಂಡದ ಕಾರ್ಯನಿರ್ವಹಣೆಯಲ್ಲಿ ಸುಧಾರಣೆಯಾಗಿದೆ ಎಂದು ವಿಕ್ರಂ ಆಸ್ಪತ್ರೆಯ ವೈದ್ಯರು ಕೂಡ ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada