Select Your Language

Notifications

webdunia
webdunia
webdunia
webdunia

'ಅಂಬರೀಷ್ ಆರೋಗ್ಯದಲ್ಲಿ ಸುಧಾರಣೆ, ಯಾವುದೇ ಆತಂಕವಿಲ್ಲ'

'ಅಂಬರೀಷ್ ಆರೋಗ್ಯದಲ್ಲಿ ಸುಧಾರಣೆ, ಯಾವುದೇ ಆತಂಕವಿಲ್ಲ'
, ಭಾನುವಾರ, 2 ಮಾರ್ಚ್ 2014 (11:43 IST)
PR
PR
ಬೆಂಗಳೂರು: ಸಚಿವ ಅಂಬರೀಶ್ ರವರನ್ನು ಹೆಚ್ಚಿನ ಚಿಕಿತ್ಸೆ ಮತ್ತು ವಿಶ್ರಾಂತಿಯ ಕಾರಣಕ್ಕೆ ಸಿಂಗಾಪುರಕ್ಕೆ ಕರೆದೊಯ್ಯಲಾಗಿದೆ. ಇಂದು ಬೆಳಿಗ್ಗೆ 4.45 ಕ್ಕೆ ಅಂತಾರಾಷ್ಟೀಯ ವಿಮಾನ ನಿಲ್ದಾಣದಿಂದ ಏರ್ ಅಂಬುಲೆನ್ಸ್ ಮೂಲಕ ಅಂಬರೀಶ್ ಪತ್ನಿ, ನಟಿ ಸುಮಲತಾ ಮತ್ತು ವಿಕ್ರಂ ಆಸ್ಪತ್ರೆಯ ವೈದ್ಯರಾದ ಸತೀಶ ಮತ್ತು ರಾಘವೇಂದ್ರ ಜತೆ ಸಿಂಗಾಪುರಕ್ಕೆ ಪಯಣಿಸಿದರು. ವಿಕ್ರಂ ಆಸ್ಪತ್ರೆಯಲ್ಲಿ ನೀಡುತ್ತಿದ್ದ ಚಿಕಿತ್ಸೆಯನ್ನು ಅದೇ ಆಸ್ಪತ್ರೆಯಲ್ಲಿ ಮುಂದುವರಿಸಲಾಗಿದೆ. ವೈದ್ಯ ಒಂಗ್ ನೇತೃತ್ವದಲ್ಲಿ ಅಂಬರೀಷ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಂಬರೀಷ್ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ವಿಕ್ರಂ ಆಸ್ಪತ್ರೆಯ ವೈದ್ಯರಾದ ಡಾ.ವಿಕ್ರಂ ತಿಳಿಸಿದ್ದಾರೆ.

Share this Story:

Follow Webdunia kannada