Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ಕ್ಲಬ್ ಮೇಲೆ ದಾಳಿ: 7 ಲಕ್ಷ ರೂ. ದೋಚಿದ ದರೋಡೆಕೋರರು

Webdunia
ಬುಧವಾರ, 2 ಏಪ್ರಿಲ್ 2014 (11:35 IST)
PR
PR
ಬೆಂಗಳೂರು: ಕುಂಬಳಗೋಡಿನಲ್ಲಿರುವ ಸ್ಯಾಟಲೈಟ್ ಕ್ಲಬ್ ಮೇಲೆ ನಿನ್ನೆ ರಾತ್ರಿ 11.30ಕ್ಕೆ ದರೋಡೆಕೋರರು ದಾಳಿ ನಡೆಸಿ 7 ಲಕ್ಷ ರೂ. ನಗದು, 250 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. 10-12 ಜನ ಮುಸುಕುಧಾರಿಗಳು ಕೈಯಲ್ಲಿ ಮಚ್ಚು ಮತ್ತು ಲಾಂಗ್‌ಗಳನ್ನು ಹಿಡಿದು ಬಂದಿದ್ದು, ತಮ್ಮ ಕೈಯಲ್ಲಿದ್ದ ಮಾರಕಾಸ್ತ್ರಗಳಿಂದ ಬೆದರಿಸಿ ಹಣ ದೋಚಿದ್ದಾರೆ. ಕ್ಯಾಶಿಯರ್ ಪ್ರಭಾಕರ್ ಎಂಬವರಿಗೆ ಮಚ್ಚು ತೋರಿಸಿ ಬೆದರಿಸಿ ಎಲ್ಲ ಹಣವನ್ನು ಕೊಡುವಂತೆ ಬೆದರಿಕೆ ಹಾಕಿದರು. ಕ್ಲಬ್‌ನಲ್ಲಿದ್ದ ವಸ್ತುಗಳನ್ನು ಮತ್ತು ಗಾಜನ್ನು ಪುಡಿ ಪುಡಿ ಮಾಡಿದ್ದು, ದರೋಡೆಕೋರರು ಪರಾರಿಯಾಗಿದ್ದಾರೆ.

ಯುಗಾದಿ ಹಬ್ಬದ ದಿನ ಕ್ಲಬ್‌ ಎಂದಿನಂತೆ 11 ಗಂಟೆಗೆ ಮುಚ್ಚದೇ 11.30ಕ್ಕೆ ತಡವಾಗಿ ಮುಚ್ಚಿದ್ದು, ದರೋಡೆಕೋರರಿಗೆ ಅನುಕೂಲವಾಯಿತು. ಇನ್ನೇನು ಕ್ಲಬ್ ಮುಚ್ಚುವುದಕ್ಕೆ ಸಿದ್ಥತೆ ನಡೆಸುತ್ತಿದ್ದಾಗ ಏಕಾಏಕಿ ಡಕಾಯಿತರು ನುಗ್ಗಿ ಕ್ಲಬ್‌ನಲ್ಲಿದ್ದ ವಸ್ತುಗಳನ್ನು, ಗಾಜುಗಳನ್ನು ಪುಡಿಪುಡಿ ಮಾಡಿ ಕ್ಯಾಶಿಯರ್‌ಗೆ ಮಾರಕಾಸ್ತ್ರಗಳಿಂದ ಬೆದರಿಸಿ ನಗದು ಹಣ,ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳಿಗೆ ಶೋಧ ನಡೆಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments