ಹಿರೇಮಠ್ ಹೇಳಿಕೆಗಳಿಗೆ ಕಡಿವಾಣ ಹಾಕಿ: ಕೋರ್ಟ್ಗೆ ರಮೇಶ್ ಕುಮಾರ್ ಮನವಿ
, ಬುಧವಾರ, 19 ಫೆಬ್ರವರಿ 2014 (16:46 IST)
ಬೆಂಗಳೂರು: ಮಾಧ್ಯಮಗಳ ಮುಂದೆ ತಮ್ಮ ವಿರುದ್ಧ ಅನಾಗರಿಕ ಹೇಳಿಕೆಗಳನ್ನು ಸಮಾಜಪರಿವರ್ತನೆಯ ಸಂಘಟನೆ ಅಧ್ಯಕ್ಷ ಎಸ್.ಆರ್. ಹಿರೇಮಠ್ ನೀಡುತ್ತಿದ್ದು, ಈ ರೀತಿ ಹೇಳಿಕೆಗಳನ್ನು ನೀಡಬಾರದೆಂದು ಸೂಚಿಸುವಂತೆ ರಮೇಶ್ ಕುಮಾರ್ ಸಿವಿಲ್ ಕೋರ್ಟ್ಗೆ ಮನವಿ ಮಾಡಿದ್ದಾರೆ. ಹಿರೇಮಠ್ ಅವರ ಇಲ್ಲಸಲ್ಲದ ಮಾತುಗಳಿಗೆ ಕಡಿವಾಣ ಹಾಕಬೇಕು ಎಂದು ರಮೇಶ್ ಕುಮಾರ್ ಹೇಳಿದರು. ಸುಳ್ಳುಗಳನ್ನು ಸತ್ಯವಾಗಿಸುವ ಪ್ರಯತ್ನ ಹಿರೇಮಠ್ ಮಾಡಿದ್ದು, ತಮ್ಮ ಮಾನಹಾನಿಯಾಗಿದೆ. ಹಿರೇಮಠ್ ಬಳಿ ಯಾವುದೇ ರೀತಿಯ ದಾಖಲಾತಿ ಇಲ್ಲ ಎಂದು ರಮೇಶ್ ಕುಮಾರ್ ಆರೋಪಿಸಿದ್ದಾರೆ.