ಬೆಂಗಳೂರು: ಕನಕಪುರದ ಹಾರೋಹಳ್ಳಿ ಸಮೀಪ ಎಎಪಿ ಕಾರ್ಯಕರ್ತರ ಕಾರಿನ ಮೇಲೆ ಏಕಾಏಕಿ ದಾಳಿ ಮಾಡಿದ ಘಟನೆ ನಡೆದಿದೆ. ಹಾರೋಹಳ್ಳಿಯಲ್ಲಿ ಹಿರೇಮಠ್ ಪ್ರಚಾರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ರಾಡ್ಗಳಿಂದ ದಾಳಿ ನಡೆಸಿದರು. ಇದ್ಯಾವುದೇ ಬೆದರಿಕೆ ಜಗ್ಗದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರಚಾರಕ್ಕೆ ತೆರಳಿದ್ದಾರೆ.
ದಾಳಿಯಿಂದ ಕಾರಿನ ಗಾಜು ಪುಡಿ, ಪುಡಿಯಾಗಿದೆ. ಹಿರೇಮಠ್ ಅವರನ್ನು ಗುರಿಇರಿಸಿಕೊಂಡು ದಾಳಿ ಮಾಡಲಾಗಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಹಿರೇಮಠ್ ಅವರು ರವಿಕೃಷ್ಣಾ ರೆಡ್ಡಿ ಪರ ಪ್ರಚಾರಕ್ಕೆ ಬಂದಿದ್ದಾಗ ಈ ದುಷ್ಕೃತ್ಯ ಸಂಭವಿಸಿದೆ.