Select Your Language

Notifications

webdunia
webdunia
webdunia
webdunia

ಸೋನಿಯಾ ಗಾಂಧಿ ನೇತೃತ್ವದ ಸರಕಾರ ಹಿಜಡಾ ಸರಕಾರ: ಮುತಾಲಿಕ್

ಸೋನಿಯಾ ಗಾಂಧಿ ನೇತೃತ್ವದ ಸರಕಾರ ಹಿಜಡಾ ಸರಕಾರ: ಮುತಾಲಿಕ್
ಗದಗ , ಸೋಮವಾರ, 26 ಆಗಸ್ಟ್ 2013 (11:05 IST)
PTI
ಭಾರತದ ಮೇಲೆ ಮೇಲಿಂದ ಮೇಲೆ ದಾಳಿ ನಡೆಯುತ್ತಿದ್ದರೂ ಯುಪಿಎ ಸರ್ಕಾರ ಮೃದು ಧೋರಣೆ ತಾಳುತ್ತಿದೆ. ಸೋನಿಯಾಗಾಂಧಿ ನೇತೃತ್ವದ ಸರ್ಕಾರವು ಹಿಜಡಾ ಸರ್ಕಾರದಂತಾಗಿದೆ. ಇತ್ತೀಚೆಗೆ ಅಕ್ಬರುದ್ದೀನ ಓವೈಸಿ ಎಂಬ ಹಿಂದೂ ವಿರೋಧಿಯು ಭಾರತದ ಹಿಂದುಗಳ ರುಂಡವನ್ನು ಚೆಂಡಾಡುತ್ತೇನೆ ಎಂಬ ಹೇಳಿಕೆ ನೀಡುವ ಮೂಲಕ ದೇಶದಲ್ಲಿ ಅಸಂಖ್ಯಾಂತ ಹಿಂದುಗಳನ್ನು ರೊಚ್ಚಿಗೇಳುವಂತೆ ಮಾಡಿದ್ದ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಗುಡುಗಿದ್ದಾರೆ.

ಇಂದು ದೇಶದಲ್ಲಿರುವ ಹಿಂದುಗಳ ಮೇಲೆ ದಾಳಿ ನಡೆಯುತ್ತಿದ್ದು, ಹಿಂದುಗಳು ತಮ್ಮನ್ನು ರಕ್ಷಿಸಿಕೊಳ್ಳಲು ಮನೆಯಲ್ಲಿ ಖಡ್ಗ, ತಲ್ವಾರ್‌ನಂಥ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.

ನಗರದ ವೀರನಾರಾಯಣ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಬ್ಲಡ್ ಡೋನರ್ಸ್ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿ, ಇಂಥ ಹಿಂದೂ ವಿರೋಧಿಯ ಮೇಲೆ ಯುಪಿಎ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.

ಪಾಕ್‌ನಿಂದ ನಿರಂತರ ದಾಳಿ: ಪಾಕಿಸ್ತಾನ ನಮ್ಮ ದೇಶದ ಗಡಿಕಾಯುವ ಸೈನಿಕರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್‌ನನ್ನು ಪಾಕಿಸ್ತಾನದಲ್ಲಿ ಚಿತ್ರಹಿಂಸೆ ಮಾಡಿ ಕೊಂದರು.

ಹಾಗೆಯೇ ಜಮ್ಮುಕಾಶ್ಮೀರದಲ್ಲಿ ಭಾರತದ ಪ್ರಜೆಯೊಬ್ಬರು ಪಾಕಿಸ್ತಾನಿ ಕೈದಿಯನ್ನು ಚಿತ್ರಹಿಂಸೆ ನೀಡಿ ಕೊಂದು ಭಾರತದ ಸೇಡು ತೀರಿಸಿಕೊಂಡರು. ಇಂಥ ಸ್ವಾಭಿಮಾನ ಹೊಂದಿರುವ ಭಾರತೀಯರ ಶಕ್ತಿಯನ್ನು ಶತ್ರು ರಾಷ್ಟ್ರ ಪಾಕಿಸ್ತಾನ, ಚೀನಾ ನೋಡಿ ತಿಳಿದುಕೊಂಡು ದೇಶದ ಮೇಲೆ ನಡೆಸುತ್ತಿರುವ ಆಕ್ರಮಣವನ್ನು ಕೈಬಿಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ದೇಶದ ಹಿಂದುಗಳು ಪಾಕಿಸ್ತಾನ, ಚೀನಾಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

Share this Story:

Follow Webdunia kannada