Select Your Language

Notifications

webdunia
webdunia
webdunia
webdunia

ಮೃತರ ಕುಟುಂಬಕ್ಕೆ ಕಡಿಮೆ ಪರಿಹಾರ: ಸಂಸದೆ ರಮ್ಯಾಗೆ ತರಾಟೆ

ಮೃತರ ಕುಟುಂಬಕ್ಕೆ ಕಡಿಮೆ ಪರಿಹಾರ: ಸಂಸದೆ ರಮ್ಯಾಗೆ ತರಾಟೆ
, ಮಂಗಳವಾರ, 31 ಡಿಸೆಂಬರ್ 2013 (13:24 IST)
PR
PR
ಮೈಸೂರು: ಮಂಡ್ಯ ಜಿಲ್ಲಾ ಆಸ್ಪತ್ರೆಗೆ ರಮ್ಯಾ ಭೇಟಿಯಾಗಿದ್ದಾಗ ಸಂಬಂಧಿಕರು, ಜೆಡಿಎಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಡಿ.28ರಂದು ಸಾತನೂರು ಬಳಿ ಬಸ್ ಉರುಳಿಬಿದ್ದು, ಐವರು ಮೃತಪಟ್ಟಿದ್ದರು. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಸೇರಿದ್ದ ಗಾಯಾಳುಗಳ ಭೇಟಿಗೆ ರಮ್ಯಾ ಬಂದಿದ್ದಾಗ ಜೆಡಿಎಸ್ ಸದಸ್ಯರು ರಮ್ಯಾ ಜತೆ ವಾಗ್ವಾದ ನಡೆಸಿದರು. ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರವನ್ನು ನೀಡಬೇಕೆಂದು ಜೆಡಿಎಸ್ ಸದಸ್ಯರು ಆಗ್ರಹಿಸಿದರು.

ಈಗ ಏಕೆ ಬಂದ್ರಿ ಮೇಡಂ, ಇಷ್ಟು ತಡವಾಗಿ ಏಕೆ ಬಂದ್ರಿ, ಈಗ ನಿಮ್ಮ ಗಮನ ಈಕಡೆ ಹರೀತಾ ಎಂದು ಪ್ರಶ್ನೆಯನ್ನು ಜೆಡಿಎಸ್ ಸದಸ್ಯರು ಇಟ್ಟರು. ವೋಲ್ವೋ ಬಸ್‌ ಅಪಘಾತದಲ್ಲಿ ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರವನ್ನು ಕೊಟ್ಟಿದ್ದೀರಿ. ಆದರೆ ಸಾತನೂರು ಬಸ್ ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರವನ್ನು ಜಾಸ್ತಿ ಕೊಡುವಂತೆ ಕೇಳಿದಾಗ ರಮ್ಯಾ ಕೆರಳಿ ಅವರ ಜತೆ ವಾಗ್ವಾದ ನಡೆಸಿದರೆಂದು ತಿಳಿದುಬಂದಿದೆ.

Share this Story:

Follow Webdunia kannada