Select Your Language

Notifications

webdunia
webdunia
webdunia
webdunia

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆರ್ಎಸ್ಸೆಸ್ ಪ್ರಚಾರಕ ಹನುಮೇಗೌಡ ಕಣಕ್ಕೆ

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆರ್ಎಸ್ಸೆಸ್ ಪ್ರಚಾರಕ ಹನುಮೇಗೌಡ ಕಣಕ್ಕೆ
, ಶನಿವಾರ, 29 ಮಾರ್ಚ್ 2014 (15:37 IST)
PR
PR
ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆರ್‌ಎಸ್‌ಎಸ್ ಪ್ರಚಾರಕ ಹನುಮೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ನೊಂದ ಆರ್‌ಎಸ್ಸೆಸ್ ಕಾರ್ಯಕರ್ತರ ಪರವಾಗಿ ತಾವು ಸ್ಪರ್ಧಿಸುವುದಾಗಿ ಅವರು ಹೇಳಿದರು. ಬಿಜೆಪಿ ನನ್ನನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ಅಧಿಕಾರದಲ್ಲಿದ್ದಾಗ ಬಿಜೆಪಿ ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಬಿಜೆಪಿ, ತತ್ವ, ಸಿದ್ದಾಂತ ಆದರ್ಶಗಳಿಗೆ ನೂರಕ್ಕೆ ನೂರರಷ್ಟು ತಾನು ಬದ್ಧನಾಗಿದ್ದೇನೆ. ಆದರೆ ಕೇವಲ ಬೆರಳೆಣಿಕೆಷ್ಟು ನಾಯಕರಿಗೆ ಮಾತ್ರ ತಮ್ಮ ವಿರೋಧವಿದೆ. ತಾವು ಮೋದಿಯನ್ನು ಬೆಂಬಲಿಸುತ್ತೇನೆ.

ಆದರೆ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅನಂತ್ ಕುಮಾರ್ ಅವರನ್ನು ವಿರೋಧಿಸುತ್ತೇನೆ ಎಂದು ಹನುಮೇಗೌಡ ಹೇಳಿದರು. ಹನುಮೇಗೌಡರು ಕೂಡ ಸ್ಪರ್ಧಿಸುವ ಮೂಲಕ ಅನಂತಕುಮಾರ್ ಅವರನ್ನು ಸೋಲಿಸುವ ಅಭ್ಯರ್ಥಿಯಾಗಿ ಕಣಕ್ಕಳಿದಿರುವ ಎರಡನೇ ಅಭ್ಯರ್ಥಿಯಾಗಿದ್ದಾರೆ. ಅನಂತಕುಮಾರ್ ನಡವಳಿಕೆ ವಿರುದ್ಧ ರೊಚ್ಚಿಗೆದ್ದು ಅವರ ವಿರುದ್ದ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

Share this Story:

Follow Webdunia kannada