Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಪ್ರಣಾಳಿಕೆಗಾಗಿ ರಾಹುಲ್ ಸಂವಾದ ಕಾರ್ಯಕ್ರಮ

ಬೆಂಗಳೂರಿನಲ್ಲಿ ಪ್ರಣಾಳಿಕೆಗಾಗಿ ರಾಹುಲ್ ಸಂವಾದ ಕಾರ್ಯಕ್ರಮ
, ಶನಿವಾರ, 11 ಜನವರಿ 2014 (13:36 IST)
PR
PR
ಬೆಂಗಳೂರು: ಬೆಂಗಳೂರಿಗೆ ಇಂದು ಆಗಮಿಸಿರುವ ರಾಹುಲ್ ಗಾಂಧಿ ಅವರು 200ಕ್ಕೂ ಹೆಚ್ಚು ಯುವಸಾಧಕರ ಜತೆ ಸಂವಾದ ನಡೆಸಲಿದ್ದಾರೆ. ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಪ್ರಣಾಳಿಕೆ ಸಿದ್ದಪಡಿಸುವುದಕ್ಕಾಗಿ ಟೆನಿಸ್ ಪೆವಿಲಿಯನ್‌ನಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ನಿಮ್ಮ ಧ್ವನಿ, ನಮ್ಮ ಪ್ರತಿಜ್ಞೆ ಹೆಸರಿನಲ್ಲಿ ಅಹವಾಲುಗಳನ್ನು ಸ್ವೀಕರಿಸಿ 2014ರ ಚುನಾವಣೆಯ ಪ್ರಣಾಳಿಕೆ ರೂಪಿಸುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ. 6 ಜನ ಸಚಿವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಯುವಕರಿಗೆ ಎಷ್ಟರಮಟ್ಟಿಗೆ ಆದ್ಯತೆ ನೀಡಬೇಕು ಎಂಬ ವಿಚಾರ ಕೂಡ ಚರ್ಚೆಯಾಗಲಿದೆ. ಈ ನಡುವೆ ರಾಹುಲ್ ಗಾಂಧಿ ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರಗಳಲ್ಲಿ ರಾಹುಲ್ ಕಣ್ಣಿರಿಸಿದ್ದಾರೆ. ಸಿಎಂಗಳ ಶೃಂಗಸಭೆಯಲ್ಲಿ ರಾಹುಲ್ ಈ ವಿಷಯ ಪ್ರಸ್ತಾಪಿಸಿದ್ದಾರೆ. ಸೋನಿಯಾ ಬಳ್ಳಾರಿ ಕ್ಷೇತ್ರದಲ್ಲಿ ಗೆದ್ದಿದ್ದರು. ತಾವೂ ಸಹ ಕರ್ನಾಟಕದಿಂದ ಗೆದ್ದು ಬರುವ ಇಚ್ಛೆಯನ್ನು ರಾಹುಲ್ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.

Share this Story:

Follow Webdunia kannada