ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರಿಗೆ ಬೆದರಿಕೆ ಪತ್ರ ಬಂದಿದೆ. ಧಾರವಾಡ ಕ್ಷೇತ್ರದಿಂದ ಪ್ರಹ್ಲಾದ್ ಜೋಷಿ ವಿರುದ್ಧ ಸ್ಪರ್ಧಿಸದಂತೆ ಬೆದರಿಕೆ ಪತ್ರ ಬಂದಿದೆ. ನಮ್ಮ ಬಳಿ ಸಿಡಿ ದಾಖಲೆಗಳು ಇವೆ. ನಿಮ್ಮ ಭಾಷಣ ಸಂಘಟನೆಗೆ ಮಾತ್ರ ಸೀಮಿತವಾಗಿರುವುದು ಒಳ್ಳೆಯದು ಎನ್ನುವುದು ಪತ್ರದ ಸಾರಾಂಶವಾಗಿದೆ. ಬೆಳಗಾವಿಯಿಂದ ಕೊರಿಯರ್ ಮುಖಾಂತರ ಅವರಿಗೆ ಈ ಪತ್ರ ಬಂದಿದೆ.
ವಿಧಾನಸಭೆ ಚುನಾವಣೆ ನಂತರ ಸಂಘ ಪರಿವಾರದಲ್ಲಿನ ಕೆಲವು ಬೆಳವಣಿಗೆಗಳಿಂದ ನೊಂದ ಪ್ರಮೋದ್ ಮುತಾಲಿಕ್ ಸಂಘಟನೆ ಬಿಟ್ಟು ಹೊರಹೋಗಿದ್ದರು.ವಿಶೇಷವಾಗಿ ಹಿಂದೂ ಸಂಘಟನೆಗಳ ಸದಸ್ಯರ ಮಧ್ಯೆ ಮುತಾಲಿಕ್ ಹೆಚ್ಚು ಜನಪ್ರಿಯರಾಗಿದ್ದರಿಂದ ಮುತಾಲಿಕ್ ಅವರನ್ನು ಹತೋಟಿಯಲ್ಲಿಡಬೇಕೆಂಬ ಭರದಲ್ಲಿ ಅವರ ಮೇಲೆ ಹಲವಾರು ಷರತ್ತುಗಳನ್ನು ವಿಧಿಸಲು ಸಂಘದ ಕೆಲ ಮುಖಂಡರು ಪ್ರಯತ್ನಿಸಿದ್ದರಿಂದ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಹೆಚ್ಚಾಯಿತು ಎಂಬ ಮಾತುಗಳು ಕೇಳಿಬಂದಿತ್ತು.