ಚಿಕ್ಕಮಗಳೂರು: ಚಿಕ್ಕಮಗಳೂರು ಮೂಡಿಗೆರೆ ಬಳಿಯ ಚಾರ್ಮಾಡಿ ಘಾಟಿಯಲ್ಲಿ ಕಾರೊಂದು ಮಂಗಳವಾರ ಕಂದಕಕ್ಕೆ ಉರುಳಿಬಿದ್ದಿದ್ದರಿಂದ ಒಬ್ಬ ಮೃತಪಟ್ಟಿದ್ದು ಐವರಿಗೆ ಗಾಯವಾಗಿದೆ. ಇನ್ನೋವಾ ಕಾರಿನಲ್ಲಿದ್ದ ಉಜಿರೆಯ ಮೋಹನ್(26 ವರ್ಷ) ಎಂಬವರು ಮೃತಪಟ್ಟಿದ್ದು ಇನ್ನೂ ಐವರಿಗೆ ಗಾಯವಾಗದಿದೆ. ಚಾರ್ಮಾಡಿ ಘಾಟಿಯ 9ನೇ ತಿರುವಿನಲ್ಲಿ ವೇಗವಾಗಿ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ದುರಂತ ಸಂಭವಿಸಿದೆ.
ಚಾರ್ಮಾಡಿ ಘಾಟ್ ಅನೇಕ ತಿರುವುಗಳಿಂದ ಕೂಡಿದ್ದು, ಇದರಲ್ಲಿ ವಾಹನ ಚಾಲನೆಯಲ್ಲಿ ಸ್ವಲ್ಪ ಎಚ್ಚರತಪ್ಪಿದರೂ ಅಪಾಯವುಂಟಾಗುವ ಸಂಭವವಿರುತ್ತದೆ.ಚಾರ್ಮಾಡಿ ಬೆಳ್ತಂಗಡಿ ತಾಲೂಕಿನ ಗ್ರಾಮವಾಗಿದ್ದು, ಪಶ್ಚಿಮ ಘಟ್ಟದಲ್ಲಿ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯನ್ನು ಸಂಪರ್ಕಿಸುತ್ತದೆ. ಚಾರ್ಮಾಡಿ ಗ್ರಾಮದಿಂದ ಆರಂಭವಾಗುವ ಘಾಟಿ ಕೊಟ್ಟಿಗೆರೆಯಲ್ಲಿ ಕೊನೆಗೊಳ್ಳುತ್ತದೆ.