Select Your Language

Notifications

webdunia
webdunia
webdunia
webdunia

ಅನ್ನಭಾಗ್ಯಕ್ಕೆ ಕನ್ನ: ಸದಾನಂದ ಗೌಡ ಪರಿಷತ್ತಿನಲ್ಲಿ ಪ್ರಸ್ತಾಪ

ಅನ್ನಭಾಗ್ಯಕ್ಕೆ ಕನ್ನ: ಸದಾನಂದ ಗೌಡ ಪರಿಷತ್ತಿನಲ್ಲಿ ಪ್ರಸ್ತಾಪ
, ಶುಕ್ರವಾರ, 21 ಫೆಬ್ರವರಿ 2014 (11:15 IST)
PR
PR
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ವಿಧಾನಪರಿಷತ್ತಿನಲ್ಲಿ ಅನ್ನಭಾಗ್ಯ ಯೋಜನೆಯ ದುರ್ಬಳಕೆ ಕುರಿತು ಪ್ರಸ್ತಾಪ ಮಾಡಿದರು. ಹಗರಣದ ವರದಿಯನ್ನು ನಾನು ನೋಡಿದ್ದೇನೆ. ಆ ರೀತಿ ದುರ್ಬಳಕೆ ಆಗದಂತೆ ನೋಡಿಕೊಳ್ಳಿ ಎಂದು ಸದಾನಂದ ಗೌಡ ಹೇಳಿದರು. ಆಗ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಆ ರೀತಿಯ ದುರ್ಬಳಕೆ ಆಗದಂತೆ ಕ್ರಮ ಕೈಗೊಳ್ತೀವಿ ಎಂದು ಭರವಸೆ ನೀಡಿದರು.ಟಿವಿ ವಾಹಿನಿಯೊಂದರಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದಾರೆಂಬ ಸುದ್ದಿಪ್ರಕಟವಾದ ಬಳಿಕ ಆಹಾರ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದರು.

ಆದರೆ ಅಕ್ಕಿನುಚ್ಚು, ಜೋಳ ಮತ್ತು ಸಜ್ಜೆ ಮಾತ್ರ ಗೋದಾಮಿನಲ್ಲಿ ಪತ್ತೆಯಾಗಿದ್ದರಿಂದ ಅವರಿಗೆ ನಿರಾಶೆಯಾಗಿದೆ. ಅಧಿಕಾರಿಗಳು ದಾಳಿಮಾಡುವಷ್ಟರಲ್ಲಿ ಅಕ್ಕಿಯನ್ನು ಬೇರೆಕಡೆ ಸಾಗಿಸಲಾಗಿತ್ತೆಂದು ಹೇಳಲಾಗುತ್ತಿದೆ.

Share this Story:

Follow Webdunia kannada